ಕಡಾಕೊಳ್ಳ:ನೈರ್ಮಲ್ಯತೆ ಕಾಣೆ,ಜನಪ್ರತಿನಿಧಿಗಳ ಕಡಗಣನೆ ಜನಸಾಮಾನ್ಯರಿಂದ-ಆರೋಪ*

Listen to this article

*ಕಡಾಕೊಳ್ಳ:ನೈರ್ಮಲ್ಯತೆ ಕಾಣೆ,ಜನಪ್ರತಿನಿಧಿಗಳ ಕಡಗಣನೆ-ಆರೋಪ*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ಹೋಬಳಿಯ ಕಡಾಕೊಳ್ಳ ಗ್ರಾಮದಲ್ಲಿ,ತ್ಯಾಜ್ಯ ನೀರು ಪ್ರಮುಖ ರಸ್ಥೆ ಮಧ್ಯದಲ್ಲಿಯೇ ಹರಿದಾಡುತ್ತಿದೆ.

ಗ್ರಾಮದ ಒಂದು ಕಿಮೀ ರಸ್ಥೆ ಕೆಸರುಗದ್ದೆಯಾಗಿದೆ,ಗ್ರ‍ಾಮದ ಬಹುತೇಕ ಕಡೆಗಳಲ್ಲಿ ನೈರ್ಮಲ್ಯತೆ ಕಾಣದಾಗಿದೆ.ಗ್ರಾಮದ ಜನತೆ ಸಾಂಕ್ರ‍ಾಮಿಕ ರೋಗಗಳ ಭೀತಿಯಲ್ಲಿದ್ದಾರೆ.ತ್ಯಾಜ್ಯ ನೀರಿನಲ್ಲಿ ಕಸ ಕೊಳೆತು ನಾರುತ್ತಿದ್ದು ಸೊಳ್ಳೆಗಳ ಹಾವಳಿಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.ಹಲವು ವರ್ಷಗಳಿಂದ ಇದೇ ದುಸ್ಥಿತಿಯಲ್ಲಿದ್ದರೂ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲ, ಜನ ಪ್ರತಿನಿಧಿಗಳು ಹೆಸರಿಗಷ್ಟೇ ಇದ್ದಾರೆ ಕಿಂಚಿತ್ತು ಎಂದು ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರ‍ಾಪಂ ಅಭಿವೃದ್ಧಿ ಅಧಿಕಾರಿ ಈ ವರೆಗೂ ಗ್ರಾಮಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ರಸ್ಥೆ ಕೆಸರು ಗದ್ದೆಯಾಗಿದ್ದು ಸದೃಢರೇ ನಡೆದಾಡುವುದಕ್ಕೆ ದುಸ್ಥರವಾಗಿದ್ದು, ಇನ್ನು ವೃದ್ಧರು ಮಹಿಳೆ ಹಾಗೂ ಮಕ್ಕಳು ನಡೆದಾಡುವುದು ಅಸಾಧ್ಯವಾಗಿದೆ.ಗ್ರಾಮದ ಚರಂಡಿಗಳ ನೀರು ಮತ್ತು ಗ್ರಾಮದ ಬಹುತೇಕ ಮನೆಗಳ ಬಚ್ಚಲ ನೀರು ನಳಗಳ ನೀರು,ಇವಿಷ್ಟು ಒಟ್ಟಾಗಿ ಪ್ರಮುಖ ಬೀದಿಯ ಮಧ್ಯಭಾಗದಲ್ಲಿಯೇ ಹರಿದಾಡುತ್ತಿದೆ.ಈ ತ್ಯಾಜ್ಯ ನೀರಲ್ಲೆ ನಿತ್ಯ ಗ್ರ‍ಾಮಸ್ಥರು ನಡೆದಾಡುವಂತಾಗಿದೆ,ರಸ್ತೆಗೆ ಹೊಂದಿಕೊಡಿರುವ ಹಾಗೂ ಇಕ್ಕೆಲಗಳಲ್ಲಿರುವ ಮನೆಗಳ ಅಂಗಳದಲ್ಲಿಯೇ ಈ ಗಟಾರದ ನೀರು ಹರಿದಾಡುತ್ತಿದೆ.
ಇದರಿಂದಾಗಿ ಇವರೆಲ್ಲರೂ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ, ಮೋರಿ ನೀರಿನಿಂದಾಗಿ ಸೊಳ್ಳೆಗಳು ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಶೀಘ್ರವೇ ಗ್ರ‍ಾಪಂ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕ‍ಾಗಮಿಸಿ ಪರಿಶೀಲಿಸಬೇಕು,ತುರ್ತಾಗಿ ನೈರ್ಮಲ್ಯತೆ ಕಾಪಾಡುವಲ್ಲಿ ಅಗತ್ಯ ಕ್ರಮ ಜರುಗಿಸಬೇಕಿದೆ.ಗ್ರ‍ಾಮದ ಪ್ರಮುಖ ರಸ್ಥೆ ಇದಾಗಿದ್ದು ತ್ಯಾಜ್ಯ ನೀರು ಗ್ರ‍ಾಮದಿಂದ ಹೊರ ಸಾಗುವಂತೆ ಅಗತ್ಯ ಯೋಜನೆ ರೂಪಿಸಬೇಕಿದೆ ಎಂದು,ಕಡಾಕೊಳ್ಳ ಗ್ರಾಮಸ್ಥರು ಈ ಮೂಲಕ ಗ್ರಾಪಂ ಅಧಿಕಾರಿಗೆ ಒತ್ತಾಯಿಸಿದ್ದಾರೆ. ನಿರ್ಲಕ್ಷ್ಯ ತೋರಿದ್ದಲ್ಲಿ ಜಿಲ್ಲಾಧಿಕಾರಿ ಗಳಲ್ಲಿ ದೂರು ನೀಡಲ‍‍ಾಗುವುದೆಂದು ಅವರು ಎಚ್ಚರಿಸಿದ್ದಾರೆ.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend