ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿಯ ಎಸ್ಸಿ ಕಾಲೋನಿಯ ನೀರಿನ ಬವಣೆಯನ್ನ,”ಪೂಜಾರಿಹಳ್ಳಿಯ ಕಾಲೋನಿಯಲ್ಲಿ ನೀರಿಗಾಗಿ ನಿತ್ಯ ಆರಾಧನೆ” ಎಂಬ ತಲೆಬರಹದಡಿ. ವಸ್ಥು ನಿಷ್ಠ ವರದಿ ಮಾಡಲಾಗಿತ್ತು ವರದಿ ಮೂಲಕ ಜನರ ಸಮಸ್ಯೆ ಅರಿತ ಶಾಸಕರು ತಮ್ಮ ಆಪ್ತ ಸಹಾುಕರಾದ ಶ್ರಿಕಾಂತರವರ ಮೂಲಕ ಪರಿಸ್ಥಿತಿಯ ವಿವರ ಪಡೆದಿದ್ದಾರೆ.ಮತ್ತು ಗ್ರಾಮಸ್ಥರ ಅಳಲನ್ನು ಆಲಿಸಿದ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ರವರು. ಕೂಡಲೇ ಗ್ರಾಮಸ್ಥರ ಅಹವಾಲಿಗೆ ಸ್ಪಂಧಿಸಿದ್ದು ಬೋರ್ ವೆಲ್ ಹಾಕಿಸುವ ಮೂಲಕ,ಗ್ರಾಮಸ್ಥರ ನೀರಿನ ಸಮಸ್ಯೆಗೆ ಖಾಯಂ ಪರಿಹಾರ ದೊರಕಿಸಿದ್ದಾರೆ.ಅವರ ನೀರಿನ ಸಮಸ್ಯೆಯನ್ನ ಬಗೆಹರಿಸಿದ್ದಾರೆ,ಅವರ ಜನಪರ ಕಾಳಜಿಯನ್ನು ದಲಿತರ ಕಾಲೋನಿ ಜನ ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ.
ಈ ಸಂಬಂಧಿಸಿದಂತೆ ಸ್ಥಳೀಯ ದಲಿತ ಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು ಹಾಗೂ ಮಹಿಳಾ ಸಂಘಗಳು ಹಾಗೂ ರೈತ ಸಂಘಗಳ ಪದಾಧಿಕಾರಿಗಳು,ಗ್ರಾಮಸ್ಥರು ಶಾಸಕ ಎನ್.ವೈ.ಗೋಪಾಲಕೃಷ್ಣ ರವರ ಸ್ಪಂಧನೆಗೆ ಅಭಿನಂದಿಸಿದ್ದಾರೆ. ವಿವಿದ ಪಕ್ಷಗಳಬಮುಖಂಡರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030