*ಕೂಡ್ಲಿಗಿ:ಬಲಿಗಾಗಿ ಕಾದಿರುವ ಗುಂಡಿ,ತೂಕಡಿಸುತ್ತಿರುವ ಪಪಂ*-ವಿಜಯನಗರ ಕೂಡ್ಲಿಗಿ ಪಟ್ಟಣದ 5ನೇ ವಾರ್ಡ್ ಆಜಾದ್ ನಗರ ಮಸೀದಿ ಗಲ್ಲಿ ಮುಂಭಾಗದಲ್ಲಿ,ರಸ್ಥೆಯಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದೆ ಕಳೆದ ಎರೆಡು ತಿಂಗಳಾದರೂ ಪಪಂರವರು ದುರಸ್ಥಿಗೊಳಿಸಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಡಿಗೆ ಅಂಟಿಂಕೊಂಡಿರುವ ರಸ್ಥೆಯ ಎರೆಡೂ ಕಡೆಯ ಭಾಗಗಳಲ್ಲಿ ಗುಂಡಿಗಳಾಗಕವೆ,ಬೈಕ್ ಸವಾರರು ಜೀವವನ್ನು ಕೈಯಲ್ಲಿಡಿದುಕೊಂಡು ಸಂಚರಿಸಬೇಕಿದೆ.ಹಲವು ಮಕ್ಕಳು ವೃದ್ಧರು ಆಯಾ ತಪ್ಪಿ ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ,ರಸ್ಥೆ ನಿರ್ಮಾಣದ ಸಂದರ್ಭದಲ್ಲಿ ಕಳಪೆ ಕಾಮಗಾರಿಯಾಗಿರುವ ಕಾರಣ ಇಷ್ಟೆಲ್ಲಾ ಆವಂತರಕ್ಕೆ ಕಾರಣ ಎಂಬ ಗಂಭೀರ ಆರೋಪವನ್ನ ಕೆಲವರು ಮಾಡಿದ್ದಾರೆ.
ಪಪಂ ಸದಸ್ಯರು ಹಾಗೂ ಪಪಂ ಮುಖ್ಯಾಧಿಕಾರಿ ಗಮನಕ್ಕೆ ತಂದಿದೆಯಾದರು ಸಾರ್ವಜನಿಕರ ಅಹವಾಲಿಗೆ ಸ್ಪಂಧಿಸುತ್ತಿಲ್ಲ,ಕಳೆದ ಎರೆಡು ತಿಂಗಳಿಂದ ಅವರ ಗಮನಕ್ಕೆ ತಂದಿದ್ದರೂ ಕುಡ ಸದಸ್ಯರಾಗಲೀ ಅಧಿಕಾರಿಗಳಾಗಲಿ ಈವರೆಗೂ ಸೌಜನ್ಯಕ್ಕೂ ಬಂದು ಪರಿಶೀಲಿಸಿಲ್ಲ, ಅವರು ನಿದ್ರೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.ಜವರಾಯನಂತಹ ಗುಂಡಿಯಿಂದಾಗಿ ಆಗಬಹುದಾದ ಅನಾಹುತಗಳಿಗೆ, ಕಾನನು ರೀತ್ಯ ಅವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ನಾಗರೀಕರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ವರದಿ. ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030