ಬಂಡೇಬಸಾಪುರ ತಾಂಡದ ಅಭಿವೃದ್ಧಿಗೆ ಸದಾಕಾಲವೂ ಸಿದ್ಧ ಶಾಸಕ – ಡಾ. ಶ್ರೀನಿವಾಸ್. ಎನ್ ಟಿ.
ಕೂಡ್ಲಿಗಿ ಪಟ್ಟಣದಿಂದ ಬಂಡೇಬಸಾಪುರ ತಾಂಡದವರಿಗೂ ಮಾನ್ಯಶಾಸಕರು “ರಸ್ತೆ ಅಭಿವೃದ್ಧಿ ಕಾಮಗಾರಿ “ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.
ಊರಿನ ರಸ್ತೆ ಹದಗೆಟ್ಟಿರುವುದು ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡಲು ಮುಖಂಡರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು.
ಬಂಡೇಬಸಾಪುರ ತಾಂಡದ ರಸ್ತೆ ಅಭಿವೃದ್ಧಿಗೆ – 5 ಕೋಟಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 20 ಲಕ್ಷ ಹಣ ಬಿಡುಗಡೆ ಆಗಿದೆ.
ತಾಂಡಗಳು ಕೂಲಿಗಾಗಿ ಗುಳೇ ಹೋಗುವುದನ್ನು ತಪ್ಪಿಸುವೆ.
ಕಲ್ಯಾಣ ಕರ್ನಾಟಕದ ಅನುದಾನದಲ್ಲಿ ಕ್ಷೇತ್ರದ ಪ್ರತಿ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.
ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದಲ್ಲಿ ಅಂಗವಿಕಲರಿಗೆ ನೂರು ತ್ರೀಚಕ್ರ ವಾಹನಗಳು ಬಂದಿದ್ದೂ ತಮ್ಮ ಊರಿನ ಅಂಗವಿಕಲರಿಗೆ ವಾಹನಗಳನ್ನು ಒದಗಿಸುವೆ ಎಂದೂ ತಿಳಿಸಿದರು.
ಎಲ್ಲಾ ವರ್ಗದ ದೀನ – ದಲಿತರ ಅಭಿವೃದ್ಧಿಗೆ ಒತ್ತು ಕೊಡುವ ಪಕ್ಷ ಅಂದರೇ ಅದು ಕಾಂಗ್ರೆಸ್ ಪಕ್ಷ .
ಸ್ಥಳೀಯ ಮುಖಂಡರಾದ ಈಶ್ವರ ನಾಯಕ್ ಹಾಗೂ ಯುವರಾಜ್ ನಾಯಕ್ ಅವರು ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಗುರುಸಿದ್ದನಗೌಡ್ರು, ಶಶಿಧರ ಸ್ವಾಮಿ, ಉದಯ ಜನ್ನು, ಕಾವಲಿ ಶಿವಪ್ಪನಾಯಕ, ಜಯರಾಮ್, ಕುಮಾರಸ್ವಾಮಿ, ವೀರಭದ್ರಪ್ಪ , ಎಸ್ ವೆಂಕಟೇಶ, ರಿಯಾಜ್ , ಶಿವಪುರ ಗ್ರಾ. ಪಂ. ಅಧ್ಯಕ್ಷರು , ಸದಸ್ಯರು, ವಿವಿಧ ಮುಖಂಡರು , ಗ್ರಾಮಸ್ಥರು ಉಪಸ್ಥಿತರಿದ್ದರು….
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030