ಬಾಲಕನ ಸಾವಿನಲ್ಲೂ ಮಾನವೀಯತೆಯನ್ನು ಮೆರೆದ ಕುಟುಂಬ…!!!

Listen to this article

ಸಾವಿನಲ್ಲೂ ಸಾರ್ಥಕತೆ ಮೆರೆದ ಸಾತ್ವಿಕ್

ಮಾನವೀಯತೆ ಅನ್ನೋದು ಪ್ರತಿಯೊಬ್ಬರ ಆಸ್ತಿಪಾಸ್ತಿ, ಅಂತಸ್ತು ಮತ್ತು ಸ್ಥಾನ ಮಾನಕ್ಕಿಂತ ದೊಡ್ಡದು..
ಅದನ್ನು ರೂಢಿಸಿಕೊಂಡರೆ, ಈ ಬದುಕಿಗೆ ಒಂದರ್ಥ ಬರುತ್ತದೆ ಎಂಬುದಕ್ಕೆ ಮಗುವಿನ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ಟಿ. ಚಿಕ್ಕಣ್ಣಜ್ಜ ಮತ್ತು ಮಗಳು ಚೇತನಾ ತುಡುಮ ಕುಟುಂಬದವರು.ಈ ಸಾವು ನ್ಯಾಯವೇ ಎಂದು ವಿಧಿಯನ್ನೊಮ್ಮೆ ಮನದಲ್ಲೇ ಶಪಿಸಿ ಬಿಡಬೇಕು ಎನಿಸುತ್ತದೆ. ಏಕೆಂದರೆ ಮಗನನ್ನು ಉಳಿಸಿಕೊಡುವಂತೆ ವೈದ್ಯರು ಮತ್ತು ದೇವರಿಗೆ ಪರಿಪರಿಯಾಗಿ ಬೇಡಿಕೊಂಡರೂ ಸಾಧ್ಯವಾಗದ ಸಂದಿಗ್ಧ ಪರಿಸ್ಥಿಯಲ್ಲಿ, ಪುತ್ರ ಶೋಕದಲ್ಲೂ ಮಗನ ಅಂಗಾಂಗ ದಾನ ಮಾಡುವ ಶ್ರೇಷ್ಠ ನಿರ್ಧಾರ ಕೈಗೊಂಡ ತಾಯಿ ಚೇತನಾರವರು ಪ್ರತಿಯೊಬ್ಬ ತಾಯಿಗೂ ಮಾದರಿಯಾಗಿ ನಿಲ್ಲುವರು. ಮತ್ತು  ಶನಿವಾರ ಆಲೂರಿನ ವೀರಶೈವ ರುದ್ರಭೂಮಿಯಲ್ಲಿ ಕುಮಾರ ಸಾತ್ವಿಕ್ ಅವರ ಅಂತ್ಯ ಕ್ರಿಯೆಯನ್ನು ನೆರವೇರಿಸಲಾಯಿತು, ಮೃತ ಸಾತ್ವಿಕ್ಆತ್ಮಕ್ಕೆ  ಆ ದೇವರು ಚಿರಶಾಂತಿ ಕೊಡಲಿ.ಮತ್ತು ಅವರ ಕುಟುಂಬ ವರ್ಗದವರಿಗೆ ದೇವರು ದುಃಖ ಸಹಿಸುವ ಶಕ್ತಿ ನೀಡಲಿ…

 

ವರದಿ. ಬಸಪ್ಪ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend