ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿದ್ಧತೆ!!!! ಕೂಡ್ಲಿಗಿ: ರಾಜ್ಯಾದ್ಯಂತ ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಹಾಗೂ ಅನುದಾನ ರಹಿತ ಒಟ್ಟು 84 ಪ್ರೌಢಶಾಲೆಗಳಿದ್ದು. 18 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, 4627 ಪರೀಕ್ಷೆಗೆ ನೋಂದಣಿಯಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಸಾಧ್ಯತೆ ಇದೆ. ಕೂಡ್ಲಿಗಿ ಹಾಗೂ ಈಗಿನ ಕೊಟ್ಟೂರು ತಾಲೂಕಿನಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳಿದ್ದು ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ 12 ಡೆಸ್ಕ್ ಗಳ ವ್ಯವಸ್ಥೆ ಮಾಡಲಾಗಿದ್ದು, ಇದರಂತೆ ಇನ್ನೂರ ಒಂದು ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ಹೆಚ್ಚುವರಿ ಯಾಗಿ 18 ಕೊಠಡಿಗಳ ವ್ಯವಸ್ಥೆ ಸಹ ಮಾಡಲಾಗಿದ್ದು, ಎಲ್ಲಾ ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಲು ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕು ಪಂಚಾಯಿತಿ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ಪತ್ರ ಬರೆಯಲಾಗಿದೆ ಎಂದು ತಿಳಿದಿದೆ. ಕೂಡ್ಲಿಗಿ ಸರ್ಕಾರಿ ಜೂನಿಯರ್ ಕಾಲೇಜ್, ಎಚ್ಎಮ್ ವಿ ಪದವಿಪೂರ್ವ ಕಾಲೇಜ್, ರೇಣುಕಾ ಪದವಿಪೂರ್ವ ಕಾಲೇಜ್, ಕೊಟ್ಟೂರು ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಗುರುದೇವ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಬಾಲಕರ ಪ್ರೌಢಶಾಲೆ ಚಿಕ್ಕಜೋಗಿಹಳ್ಳಿ, ಸರ್ಕಾರಿ ಬಾಲಕಿಯರ ಚಿಕ್ಕಜೋಗಿಹಳ್ಳಿ,ಹಾಗೂ ಎಸ್ ಕೆ ಡಿ ಬಿ ಪ್ರೌಢಶಾಲೆ ಹೊಸಳ್ಳಿ, ಬಾಲಕಿಯರ ಪ್ರೌಢಶಾಲೆ ಹೊಸಳ್ಳಿ, ಕರ್ನಾಟಕ ಪಬ್ಲಿಕ್ ಶಾಲೆ ಗುಡೇಕೋಟೆ, ಉಜ್ಜನಿ ಜಗದ್ಗುರು ಪ್ರೌಢಶಾಲೆ, ಉಜ್ಜಿನಿ, ತರಳಬಾಳು ಸಿದ್ದೇಶ್ವರ ಪ್ರೌಢಶಾಲೆ ತೂಲಹಳ್ಳಿ, ಶರಣಬಸವೇಶ್ವರ ಸಮನ್ವಯ ಪ್ರೌಢಶಾಲೆ ಕಾನಾಮಡುಗು, ಸರ್ಕಾರಿ ಪ್ರೌಢಶಾಲೆ ಹಿರೇ ಹೆಗ್ಡಾಳ್, ಸರ್ಕಾರಿ ಪ್ರೌಢಶಾಲೆ ಚೌಡಾಪುರ, ಕರ್ನಾಟಕ ಪಬ್ಲಿಕ್ ಶಾಲೆ ಕೋಗಳಿ, ಸರ್ಕಾರಿ ಪ್ರೌಢಶಾಲೆ ತಾಯಕನಹಳ್ಳಿ ಸೇರಿ ಒಟ್ಟು 18 ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದಂತೆ 18 ಮುಖ್ಯ ಅಧಿಕ್ಷಕರು, 18 ಮೊಬೈಲ್ ಸ್ವಾಧೀನಾಧಿಕಾರಿಗಳು, 18 ಮುಖ್ಯ ಪರೀಕ್ಷಾ ಪತ್ರಿಕೆ ಅಧಿಕ್ಷಕರು, 18 ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ಐವರು ವೀಕ್ಷಕರು, ಎರಡು ತಾಲೂಕಿನ ತಹಶೀಲ್ದಾರರು, ತಾಲೂಕಿನ ವೈದ್ಯಾಧಿಕಾರಿಗಳು ಪರೀಕ್ಷಾ ವೀಕ್ಷಕರಾಗಿದ್ದಾರೆ. ಪರೀಕ್ಷೆ ಪತ್ರಿಕೆ ರವಾನೆಗೆ ಐದು ಮಾರ್ಗಸೂಚಿಗಳನ್ನು ಸೂಚಿಸಿದ್ದು ಇದಕ್ಕೆ ಐವರು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ, ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ಯಾವುದೇ ಪರೀಕ್ಷೆ ಅಕ್ರಮವಾಗಿ ನಡೆಯದಂತೆ ಬಿಗಿ ಬಂದೋಬಸ್ ಕಲ್ಪಿಸಲಾಗಿದೆ ಎಂದು ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಾಹಿತಿ ತಿಳಿಸಿದೆ…
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030