ವಿಜಯನಗರ ಜಿಲ್ಲೆ
ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರ ,ರಸ್ತೆಯ ಪಕ್ಕದಲ್ಲಿರುವ ದಲಿತ ಕಾಲೋನಿಯ ವೀರ ಗೊಂಡನಹಳ್ಳಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು ..ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದಪ್ಪ ಮಾತನಾಡಿ ಮಳೆ ಬಂದಾಗ ಇಲ್ಲಿ ಸಾರ್ವಜನಿಕರು ಎತ್ತಿನಗಾಡಿಗಳು ವಾಹನಗಳು, ಓಡಾಡಲು ದಿನನಿತ್ಯ ರೈತರು ತಮ್ಮ ಜಮೀನುಗಳಿಗೆ ಹೋಗಲು ಬಹಳ ತೊಂದರೆಯಾಗುತ್ತಿತ್ತು.ಚರಂಡಿ ಮತ್ತು ಸಿ.ಸಿ.ರಸ್ತೆ ಕಾಮಗಾರಿ ಮಾಡುತ್ತಿರುವುದರಿಂದ ಪ್ರತಿಯೊಬ್ಬ ನಾಗರಿಕರಿಗೂ ರೈತರಿಗೂ ಅನುಕೂಲವಾಗಲಿದೆ. ಎಂದರು. ಅಡಿವೆಜ್ಜರ ನಾಗರಾಜ ಮಾತನಾಡಿ ಹಲವು ವರ್ಷಗಳಿಂದಲೂ ರಸ್ತೆ ದಿರಸ್ಥಿಕಂಡಿರಲಿಲ್ಲ,ಕಾಮಗಾರಿ ಪ್ರಾರಂಭಗೊಂಡಿರುವುದು ದಲಿತ ಕಾಲೋನಿಯ ಜನರಿಗೆ ತುಂಬಾ ಸಂತೋಷವಾಗಿದೆ ಎಂದು
ದಲಿತ ಮುಖಂಡರಾದ ಹೊಸಹಳ್ಳಿ ಟಿ ಗಂಗಾಧರ್ ಮಾತನಾಡಿ ಮಳೆಗಾಲದಲ್ಲಿ ಮಳೆ ಬಂದಾಗ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಬಿದ್ದ ಮಳೆಯ ನೀರು ಹೆದ್ದಾರಿಯ ಸರ್ವಿಸ್ ರೋಡ್ ಪಕ್ಕದಲ್ಲಿರುವ ದಲಿತ ಕುಟುಂಬಗಳ ಮನೆಗಳ ಅಂಗಳಗಳಿಗೆ ಹಾಗೂ ಸಾರ್ವಜನಿಕರು ಓಡಾಡುವ ರಸ್ತೆಗೆ ನುಗ್ಗಿ ಕೆಸರು ಗದ್ದೆಯಲ್ಲಿ ನೀರು ನಿಂತು ಸೊಳ್ಳೆ ಕ್ರಿಮಿಕೀಟಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ರುಜಿನಗಳಿಗೆ ಜನರು ತುತ್ತಾಗುತ್ತಿದ್ದಾರೆ, ಈ ಚರಂಡಿ ಮತ್ತು ಸಿಸಿ ರಸ್ತೆ ಕಾಮಗಾರಿ ನಿರ್ಮಾಣವಾಗುವುದರಿಂದ ಇಲ್ಲಿನ ಕುಟುಂಬಗಳ ಆರೋಗ್ಯವಂತರಾಗಿ ವಾಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹೊಸಹಳ್ಳಿ ಪೊಲೀಸ್ ಠಾಣೆಯ ಎಎಸೈ ಗೋವಿಂದಪ್ಪ ಪೊಲೀಸ್ ಪೇದೆ ಶರಣಪ್ಪ ಮುಖಂಡರಾದ ಸಿದ್ದಪ್ಪ ಚಂದ್ರಪ್ಪ ನಡೆದು ಮನೆ ತಿಪ್ಪೇಸ್ವಾಮಿ ರಾಘವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ,ಕೆಎಸ್ವೀರೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030