ವಿಜಯನಗರ ಜಿಲ್ಲೆ ಕೂಡ್ಲಿಗಿ ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮುಖಂಡ ಮಧು ಬಂಗಾರಪ್ಪ ಅವರನ್ನು ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಬಳಿ ಕಾಂಗ್ರೆಸ್ ಮುಖಂಡರು ಭಾನುವಾರ ಸಂಜೆ ಸ್ವಾಗತಿಸಿದರು.
ಹೊಸಪೇಟೆಯಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ತೆರಳುತ್ತಿರುವ ವಿಷಯ ತಿಳಿದ ಕಾಂಗ್ರೆಸ್ ಪಕ್ಷದ ಕಾನಹೊಸಹಳ್ಳಿ ಭಾಗದ ಮುಖಂಡರು, ಮಧು ಬಂಗಾರಪ್ಪ ಅವರನ್ನು ಸ್ವಾಗತಿಸುವುದರ ಜೊತೆ ಸ್ವಲ್ಪ ಹೊತ್ತು ಮಾತಕತೆ ನಡೆಸಿ ಅಲ್ಲಿಂದ ಬೀಳ್ಕೊಟ್ಟರು
ಈ ಸಂದರ್ಭದಲ್ಲಿ ಚಿಕ್ಕಜೋಗಿಹಳ್ಳಿಯ ಕೆ.ವಿ.ಆರ್. ಸತ್ಯಬಾಬು, ಮಧು, ಲೋಕಿಕೆರೆ ಲಕ್ಕಜ್ಜಿ ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡರಾದ ಜುಮ್ಮೋಬನಹಳ್ಳಿ ಜಿ. ಓಬಣ್ಣ, ಹಿಮಂತರಾಜ, ಶರಣೇಶ, ದಾಸಪ್ಪ,ಸೂರಯ್ಯ, ಬಸಪ್ಪ, ರಾಜಣ್ಣ, ರಾಮಣ್ಣ, ಗೋಪಾಲ್, ಟಿ.ಕಲ್ಲಹಳ್ಳಿ ವೆಂಕಟೇಶ್, ದಾಸಪ್ಪ ಸೇರಿ ಇತರರು ಇದ್ದರು…
ವರದಿ. ವಿರೇಶ್, ಕೆ, ಎಸ್, ಹೊಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030