ಬಿ ಜೆ ಪಿ ಪಕ್ಷದಲ್ಲಿ ಗಟ್ಟಿ ನಾಯಕರ ಕೊರತೆ ಮಧ್ಯಾಂತರ ಚುನಾವಣಾ ಅದರೂ ಅಚ್ಚರಿ ಇಲ್ಲ: ಪುತ್ರೇಶ್ ಪ್ರತಿಕ್ರಿಯೆ
ರಾಜಕೀಯ ಹಿರಿಯ ಮುತ್ಸದ್ದಿ ಶ್ರೀ ಬಿ ಎಸ್ ಯಡಿಯೂರಪ್ಪನವರು ಕಣ್ಣಿರು ಹಾಕುತ್ತಾ ರಾಜಿನಾಮೆ ನೀಡಿದ್ದು ನನಗೂ ಮನಸ್ಸಿಗೆ ನೋವಾಯಿತು, ಯಡಿಯೂರಪ್ಪ ಅವರ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ.ಅದರೆ ಈ ವಯಸ್ಸಿನಲ್ಲಿ ಕುಮಾರಸ್ವಾಮಿ ಅವರ ಸರ್ಕಾರ ತೆಗೆದು ಮುಖ್ಯಮಂತ್ರಿ ಅಗೋದು ಬೇಕಿತ್ತಾ ಅಂತ ? ಭ್ರಷ್ಟಾಚಾರ ಮತ್ತು ಕಮಿಷನ್ ದಂತೆಯಿಂದ ಪಕ್ಷಕ್ಕೆ ಮುಜುಗರ ಆಗಬಾರದು ಅನ್ನೋ ಕಾರಣಕ್ಕಾಗಿ ರಾಜಿನಾಮೆ ಕೊಡಿಸಿದಾರೆ,ಯಡಿಯೂರಪ್ಪ ನವರಿಗೆ ಯಾವುದೇ ನೈತಿಕತೆ ಉಳಿದಿಲ್ಲ. ಕುಮಾರಸ್ವಾಮಿ ಅವರಿಗೆ ಮಾಡಿದ ಮೋಸದ ಕರ್ಮ ಫಲ ಅನುಭವಿಸಬೇಕು,ದೇವರು ಅವರು ಬತ್ತಿ ಇಟ್ಟ. ಸರ್ಕಾರ ಎರೆಡು ವರ್ಷ ಪೂರೈಸೊದು ಕಷ್ಟ ಇದೆ, ಮಧ್ಯಾಂತರ ಚುನಾವಣಾ ಆದರೂ ಅಚ್ಚರಿ ಇಲ್ಲ. ದುರಂತ ಅಂದರೆ ಈ ರಾಜ್ಯ ನಡೆಸಲಿಕ್ಕೆ ಅಂತ ರಾಷ್ಟ್ರೀಯ ಪಕ್ಷದಲ್ಲಿ ಗಟ್ಟಿ ನಾಯಕ ಇಲ್ಲ ಯಡಿಯೂರಪ್ಪ ನವರನ್ನ ಬಿಟ್ಟು, ಎಂದು ಹೂವಿನ ಹಡಗಲಿ ತಾಲೂಕಿನ ಜೆ ಡಿ ಎಸ್ ಮುಖಂಡರಾದ ಪುತ್ರೇಶ್ ಕಾಯಣ್ಣನವರ್. ಪ್ರತಿಕ್ರಿಯಿಸಿದರು…
ವರದಿ: ಅಜಯ. ಚ
(ಹುಗಲೂರು)
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030