ಶಿಸ್ತು,ತಾಳ್ಮೆ ಮೈಗೂಡಿಸಿಕೊಳ್ಳಲು ಯೋಗ ಸಹಕಾರಿ :: ಎಚ್ಎಮ್ ಮನೋಜ್ ಕುಮಾರ್
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಳ್ಳಿಯ ಎಸ್ ಕೆಡಿ ಡಿವಿ ಪ್ರೌಢಶಾಲೆಯ ಆವರಣದಲ್ಲಿ ಸಾಮೂಹಿಕ ಯೋಗ ಶಿಬಿರ ಆಯೋಜಿಸಲಾಗಿತ್ತು.
ಎಚ್ ಎಂ ಮನೋಜ್ ಕುಮಾರ್ ಮಾತನಾಡಿ ಪ್ರತಿದಿನ ಯೋಗ ಮಾಡುವುದನ್ನು ಅಭ್ಯಾಸ ಮಾಡಿದಲ್ಲಿ ಜ್ಞಾನವನ್ನು ವೃದ್ಧಿಸಿಕೊಳ್ಳುವ ಜೊತೆಗೆ ಶಿಸ್ತು ಸಂಯಮ ಹಾಗೂ ತಾಳ್ಮೆಯನ್ನು ಮೈಗೂಡಿಸಿಕೊಂಡು ದೇಹದ ಅಂಗಾಂಗಗಳನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳಬಹುದು ಎಂದು ತಿಳಿಸಿದರು.
ಪ್ರತಿಯೊಬ್ಬರು ನಿತ್ಯ ಕನಿಷ್ಠ ಒಂದು ಗಂಟೆ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯವಂತ ಜೀವನ ನಡೆಸಬಹುದು.ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಯೋಗಾಭ್ಯಾಸವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯ ಕನಿಷ್ಠ ಒಂದು ಗಂಟೆ ಅಭ್ಯಾಸ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೋಗ ದಿನಾಚರಣೆ ಯಲ್ಲಿ ಹೂಡೇ ತಾಲೂಕ್ ಪಂಚಾಯತಿ ಸದಸ್ಯರಾದ ಪಾಪನಾಯಕ. ಕಿಟ್ಟಪ್ಪ ನವರ ವೀರೇಶ್, ಕುಲುಮೆ ಹಟ್ಟಿ ವೆಂಕಟೇಶ್, ಅಮಲಾಪುರದ ಅಂಜಿನಪ್ಪ, ಸಕಲಾಪುರದಹಟಿ ಬಾಲಪ್ಪ. ಶಾಂತ ನಳ್ಳಿ ವೀರಭದ್ರಪ್ಪ. ಕರಿ ವೀರಪ್ಪ. ಭಾರತೀಯ ಜನತಾ ಪಾರ್ಟಿಯ ತಾಲೂಕು ಮಂಡಲ ಅಧ್ಯಕ್ಷರು ಕೆ ಚನ್ನಪ್ಪ. ಉಪ ತಹಶೀಲ್ದಾರ್ ಚಂದ್ರಮೋಹನ್. ಟೈಲರ್ ಶಿವಣ್ಣ. ಎಚ್ಚರಿಕೆ ಪತ್ರಿಕೆ ವರದಿಗಾರರಾದ ಕೆಎಸ್ ವೀರೇಶ್,
ಕಮ್ಮರ್ ಅಂಜಿನಪ್ಪ. ಮಾರಪ್ಪ. ಸೇರಿ ಅನೇಕರು ಯೋಗ ದಿನಾಚರಣೆಯ ಉಪಸ್ಥಿತರಿದ್ದರು.
ವರದಿ ಕೆಎಸ್ ವೀರೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030