ಮೂಕಪ್ರಾಣಿ ಕತ್ತೆಗೆ ಚಿಕಿತ್ಸೆ ಕೊಡಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರಿಂದ ಅಭಿನಂದನೆ…!!!

Listen to this article

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು. ಕಾನಹೊಸಹಳ್ಳಿ.
ಮೂಕಪ್ರಾಣಿ ಕತ್ತೆಗೆ ಚಿಕಿತ್ಸೆ ಕೊಡಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರಿಂದ ಅಭಿನಂದನೆ. ಇತ್ತೀಚಿನ ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪರಿಚಿತ ವಾಹನವೊಂದು ಕತ್ತೆಗೆ ಡಿಕ್ಕಿ ಹೊಡೆದ ಪರಿಣಾಮ ವಿಪರೀತ
ಗಾಯವಾಗಿತ್ತು. ಈ ಕತ್ತೆಯು ಕುಂಟುತ್ತಾ ಕುಂಟುತ್ತಾ ಪೋಲಿಸ್ ಆವರಣಕ್ಕೆ ಬಂದಿತ್ತು. ಇದನ್ನು ನೋಡಿದ ಪೊಲೀಸರು. ಹೊಸಹಳ್ಳಿ ಪಶು ಇಲಾಖೆ ವೈದ್ಯಾಧಿಕಾರಿ ರಾಮಚಂದ್ರಪ್ಪ ರವರಿಗೆ ಫೋನ್ ಕರೆ ಮಾಡಿ ಕತ್ತೆಗೆ ಹಾಗಿರುವ ಗಂಭೀರ ಗಾಯಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿ ಬ್ಯಾಂಡೇಜ್ ಮಾಡಿಸಿ ಔಷಧೋಪಚಾರ ಮಾಡಿದರು. ಈ ಸಂದರ್ಭದಲ್ಲಿ ಪಿಎಸ್ಐ ತಿಮ್ಮಣ್ಣಚಾಮನೂರು. ಮಹಿಳಾ ಪೊಲೀಸ್ ಶ್ರೀಮತಿ ಅನಿತಾ. ಪೊಲೀಸ್ ಪೇದೆ ಕೋಟೆಪ್ಪ.ಎಂಬಿ ಅಯ್ಯನಹಳ್ಳಿ ಗ್ರಾಮದ ಗೃಹರಕ್ಷಕದಳದ ಚಂದ್ರಶೇಖರ ಸ್ವಾಮಿ. ವೈದ್ಯಾಧಿಕಾರಿ ರಾಮಚಂದ್ರಪ್ಪ. ಸಿಬ್ಬಂದಿಗಳಾದ ಬಸವರಾಜ್.ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಚಿಕಿತ್ಸೆ ಕೊಡಿಸಿ ಮಾನವೀಯತೆ ಮರೆತ ಎಲ್ಲಾ ಪೊಲೀಸ್ ಸಿಬ್ಬಂದಿಗೂ ಮತ್ತು ಪಶುವೈದ್ಯ ಇಲಾಖೆ ಸಿಬ್ಬಂದಿಗೆ. ಕಾನ ಹೊಸಹಳ್ಳಿ ಗ್ರಾಮದ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕಾನಹೊಸಹಳ್ಳಿ ಬೀದಿಗಳಲ್ಲಿ ಸಂಚರಿಸುವ ಕತ್ತೆಗಳಿಗೆ ಸಂಬಂಧಿಸಿದವರು ಯಾರಾದರೂ ಇದ್ದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡದಂತೆ ಸುರಕ್ಷಿತವಾಗಿ ಕಾಪಾಡಿಕೊಳ್ಳಿ. ಮೂಕ ಪ್ರಾಣಿಗಳಸುರಕ್ಷತೆಕಾಪಾಡಿ. ದಲಿತ ಮುಖಂಡ ಡಿ.ಎಂ ಈಶ್ವರಪ್ಪ.ಸಿದ್ದಾಪುರ….

 

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend