ಲಿಂಗಾಯ್ತರಿಗೊಂದು ಸಿಗದ ತಾಂಬೂಲ ರೆಡಿಯಾಗ್ತಿದೆ..ಎಚ್ಚರ…ಎಚ್ಚರ..!!!*l
ವೀರಶೈವ-ಲಿಂಗಾಯತ ಸಮಾಜವನ್ನು ಛಿದ್ರ ಛಿದ್ರ ಮಾಡಿ, ಆ ಮೂಲಕ ರಾಜ್ಯ ರಾಜಕಾರಣದ ಧಿಕ್ಕು ದೆಸೆಯನ್ನು ನಿರ್ಧರಿಸಬಲ್ಲ ರಾಜ್ಯದ ಬಹುಸಂಖ್ಯಾತ ವೀರಶೈವ-ಲಿಂಗಾಯತ ಸಮಾಜದ ರಾಜಕೀಯ ಶಕ್ತಿಯನ್ನು ಕುಂದಿಸುವ ಮತ್ತು ವೀರಶೈವ ಲಿಂಗಾಯತರನ್ನು ರಾಜಕೀಯವಾಗಿ ಮುಗಿಸುವ ಅತಿ ದೊಡ್ಡರಾಜಕೀಯ ಷಡ್ಯಂತ್ರವನ್ನು ಕುತಂತ್ರ ನೀತಿಯ ಪಿತಾಮಹ ಬಿಎಲ್.ಸಂತೋಷ್ ನಡೆಸಿದ್ದಾರೆ.
ಆ ಷಡ್ಯಂತ್ರದ ಭಾಗವೇ ವೀರಶೈವ-ಲಿಂಗಾಯತ ಸಮಾಜವನ್ನು ಒಡೆದು ಆಳುವ ನೀತಿ….ಕೆಲವು ವೀರಶೈವ-ಲಿಂಗಾಯತ ಶಾಸಕರಿಗೆ ವಿಧಾನಸೌಧದ ಮೂರನೇ ಮಹಡಿಯ ಆಸೆ ಹತ್ತಿಸಿ,ಇನ್ನೂ ಕೆಲವರಿಗೆ ಭವಿಷ್ಯದ ನಾಯಕತ್ವದ ಅಮಲು ಏರಿಸಿ ಒಂದೇ ಪಕ್ಷದಲ್ಲಿನ ಲಿಂಗಾಯತ ಶಾಸಕರುಗಳ ಮೂರ್ನಾಲ್ಕು ಗುಂಪಾಗುವಂತೆ ಮಾಡಿ,ಯಡಿಯೂರಪ್ಪನವರ ವಿರುದ್ಧ ಮಾತಾಡುವಂತೆ,
ನಾಯಕತ್ವ ಬದಲಾವಣೆಗೆ ಆಗ್ರಹಿಸುವಂತೆ ಪ್ರೇರೇಪಿಸುವ ಮೂಲಕ ಒಂದು ಹಂತದವರೆಗೆ ವೀರಶೈವ-ಲಿಂಗಾಯತರ ಒಗ್ಗಟ್ಟನ್ನು ಕುತಂತ್ರ ನೀತಿಯ,ಪಿತಾಮಹ ಸಂತೋಷ್ ಬಿಲ್ ಒಡೆದಾಗಿದೆ.. ಉದಾಹರಣೆಗೆ,ನೋಡುವುದಾದರೆ….
ಸೋತ ಸವದಿಯನ್ನು ಯಡಿಯೂರಪ್ಪನವರ ವಿರುದ್ಧ ಬೆಳೆಸಲು ಉಪ-ಮುಖ್ಯಮಂತ್ರಿ ಮಾಡಿದರು…
ಯತ್ನಾಳ್ ಗು ಮುಖ್ಯಮಂತ್ರಿ ಖುರ್ಚಿಯನ್ನು ಎತ್ತಿ ಕೊಡ್ತಿನಿ ಎಂದು ಭರವಸೆ ನೀಡಿ ಯಡಿಯೂರಪ್ಪನವರ ವಿರುದ್ಧ ಮಾತಾಡುವಂತೆ ಮಾಡಿದರು.
*ಅರವಿಂದ ಬೆಲ್ಲದ್ ಗು ಮುಖ್ಯಮಂತ್ರಿಯೆಂಬ ಬೆಲ್ಲ ಹಚ್ಚಿ ಯಡಿಯೂರಪ್ಪನವರ ವಿರುದ್ಧ ಕೆಲಸ ಮಾಡುವಂತೆ ಪ್ರೇರಿಪಿಸಿದರು.
ನೀನೆ ಕಣೊ ಕರ್ನಾಟಕದ ಮುಖ್ಯಮಂತ್ರಿ ಎಂದು ನಿರಾಣಿ ಶುಗರ್ಸ್ ನ ಸಕ್ಕರೆಯನ್ನು ಆತನಿಗೆ ತಿನ್ನಿಸಿ,ಬಂಗಾಳ ಚುನಾವಣೆಗೆ ಹೂಡಿಕೆ ಸಹ ಮಾಡಿಸಿಕೊಂಡರು.
ಯಡಿಯೂರಪ್ಪನವರ ವಿರುದ್ಧ,ಶಾಸಕರನ್ನು ಒಟ್ಟು ಮಾಡುವಂತೆ ಸೋಮಣ್ಣನಿಗೆ ಸುಪಾರಿ ಕೊಟ್ಟರು.
ಒಡೆದು ಆಳುವ ನೀತಿಯ ಫಲವಾಗಿ ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಎಂಬೆಲ್ಲ ಮಾತುಗಳು ನಡುವೆ, ಯಡಿಯೂರಪ್ಪನವರ ನಂತರ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಹೆಸರುಗಳಲ್ಲಿ ಈಗ ಸವದಿ ಇಲ್ಲ,ಯತ್ನಾಳ್ ಮಾಯಾ, ಹೊಸ ಮುಖದ ಬೆಲ್ಲದ್ ನಾಪತ್ತೆ, ಇನ್ನೆಲ್ಲಿ ನಿರಾಣಿ, ಸೋಮಣ್ಣ, ನಿನಗೆ ಪಂಗನಾಮ ಕಣಣ್ಣ.
ಈಗ ತೇಲಿ ಬರುತ್ತಿರುವ ಹೆಸರು Once Again ಮಹಾರಾಷ್ಟ್ರದಲ್ಲಿ ಬಹುಸಂಖ್ಯಾತ ಮರಾಠರ ಮತವನ್ನು ಪಡೆದು ಅಧಿಕಾರಕ್ಕೆ ಬಂದ ನಂತರ ಬ್ರಾಹ್ಮಣ ಸಮುದಾಯದ ದೇವೇಂದ್ರ ಫಡ್ನವಿಸ್ ರನ್ನು ಪ್ರತಿಷ್ಟಾಪಿಸಿದಂತೆ ಇಲ್ಲೂ ಸಹ ಬ್ರಾಹ್ಮಣನಾದ ಪ್ರಹ್ಲಾದ ಜೋಷಿನ ಪ್ರತಿಷ್ಠಾಪಿಸುವುದು ಅಥವಾ ಸ್ವತಃ ಸಂತೋಷ್ ಬಿಎಲ್ ಕರ್ನಾಟಕದ ಮುಖ್ಯಮಂತ್ರಿ ಆಗುವುದು. ಇದೇ ತಾನೆ ಒಡೆದು ಆಳುವ ಕುತಂತ್ರ ನೀತಿ.
ತಾಕತ್ತಿದ್ದರೆ ಜೋಷಿ ಹೆಸರಲ್ಲಿ ಬಿಎಲ್ ಸಂತೋಷ್ ಹೆಸರಲ್ಲಿ ಚುನಾವಣೆ ನಡೆಸಿ ಅಧಿಕಾರಕ್ಕೆ ಬಂದು ರಾಜ್ಯಭಾರ ನಡೆಸಲಿ.
ಅದನ್ನು ಬಿಟ್ಟು ಯಡಿಯೂರಪ್ಪನವರ ಹೆಸರಲ್ಲಿ ಅಧಿಕಾರಕ್ಕೆ ಬಂದು, ನಂತರ ತಮ್ಮ ಮೆರವಣಿಗೆ ನಡೆಸಿಕೊಳ್ಳುವುದು.
ಈಗಲಾದರು ಬಿಜೆಪಿ ಪಕ್ಷದಲ್ಲಿನ ವೀರಶೈವ-ಲಿಂಗಾಯತ ಸಮಾಜದ ರಾಜಕೀಯ ನಾಯಕರು ಇವರ ಕುತಂತ್ರ ಬುದ್ಧಿಯನ್ನು ಅರಿತು, ರಾಜಕೀಯ ಸ್ಥಾನಮಾನದ ಹುಸಿ ಭರವಸೆಯನ್ನು ನಂಬದೆ, ಇವರ ಕುತಂತ್ರ ನೀತಿಗೆ ಬಲಿಯಾಗದೇ ಒಗ್ಗಟ್ಟಾಗಿರಬೇಕಾಗಿ ವಿನಂತಿ.
“ಸ್ವಾಭಿಮಾನ ಮುಂದೆ ಹಣ,ಅಧಿಕಾರ,ಸ್ಥಾನ-ಮಾನ ಎಲ್ಲಾ ನಗಣ್ಯ.
ಹಾರುತಿರಲಿ ಕನ್ನಡದ ಬಾವುಟ,ನಿಲ್ಲದಿರಲಿ ವೀರಶೈವ-ಲಿಂಗಾಯತರ ಆರ್ಭಟ…
ವರದಿ. ಎಚ್ಚರಿಕೆ ಪತ್ರಿಕೆ ಸಂಪಾದಕರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030