ರಾಷ್ಟ್ರಪತಿ ಚುನಾವಣೆ : ಬಿಜೆಪಿಯ ಮೈತ್ರಿ ಕೂಟ NDA ಅಭ್ಯರ್ಥಿಯಾಗಿ ಒಡಿಶ ಮೂಲದ ದ್ರೌಪದಿ ಮುರ್ಮು ಆಯ್ಕೆ…..
ಬಿಜೆಪಿಯ ಮೈತ್ರಿ ಕೂಟ NDA ಅಭ್ಯರ್ಥಿಯಾಗಿ ರಾಷ್ಟ್ರಪತಿ ಹುದ್ದೆಗೆ ಒಡಿಶ್ಶಾ ಮೂಲದ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ.
ಇವರು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. ಜತೆಗೆ ಇವರು ಜಾರ್ಖಂಡ್ನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದೇ ಮೊದಲ ಬಾರಿಗೆ ಬುಡಕಟ್ಟು ಜನಾಂಗದಿಂದ ಒಬ್ಬರು ರಾಷ್ಟ್ರಪತಿ ಹುದ್ದೆಗೆ ನಾಮನಿರ್ದೇಶನಗೊಂಡ ಹಿರಿಮೆ ಈ ಮೂಲಕ ಇವರಿಗೆ ಸಂದಿದೆ. ಇವರು 2015 – 2021ರ ವರೆಗೆ ಜಾರ್ಖಂಡ್ನ ರಾಜ್ಯಪಾಲರಾಗಿಯೂ ಇದ್ದರೆ. ಜಾರ್ಖಂಡ್ನಲ್ಲಿ ಚೊಚ್ಚಲ ಬಾರಿಗೆ ಸಂಪೂರ್ಣ ಅವಧಿಗೆ ಸೇವೆ ಸಲ್ಲಿಸಿದ ರಾಜ್ಯಪಾಲರು ಎಂಬ ಹಿರಿಮೆಯೂ ಇವರಿಗಿದೆ.
ಇವರು 1997ರಲ್ಲಿ ತಮ್ಮ ರಾಜಕೀಯ ಬದುಕು ಆರಂಭಿಸಿದ್ದು, 2000 – 2004ರ ಅವಧಿಯಲ್ಲಿ ಒಡಿಶ್ಶಾದಲ್ಲಿ ಸಚಿವೆಯಾಗಿಯೂ ಇದ್ದರೂ. ಬಿಜೆಪಿಯ ST ಘಟಕದ ಉಪಾಧ್ಯಕ್ಷೆಯಾಗಿಯೂ ಇವರು ಬಹುಕಾಲ ಇದ್ದರೂ. ಇದೀಗ NDA ಕೂಟದಿಂದ ರಾಷ್ಟ್ರಪತಿ ಹುದ್ದೆಗೆ ನಾಮ ನಿರ್ದೇಶನಗೊಂಡಿದ್ದಾರೆ.
ವರದಿ.ನ್ಯೂಸ್ ಬ್ಯುರೋ ಎಚ್ಚರಿಕೆ ಕನ್ನಡ ನ್ಯೂಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030