ತುಟ್ಟಿಭತ್ಯೆ: ಸಿಎಂಗೆ ಅಭಿನಂದನೆ
ಕೋವಿಡ್- ಹಿನ್ನೆಲೆ ೨೦೨೦ರ ಜ. ೧ರಿಂದ ತಡೆಹಿಡಿಯಲಾಗಿದ್ದ ೩ ಕಂತುಗಳ ತುಟ್ಟಿಭತ್ಯೆ ಮಂಜೂರು ಮಾಡುವಂತೆ ಸರಕಾರಿ ನೌಕರರ ಸಂಘ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಜು. ೧ರಿಂದ ಅನ್ವಯವಾಗುವಂತೆ ಬಾಕಿ ಇರುವ ಶೇ.೧೧ ರಷ್ಟು ತುಟ್ಟಿ ಭತ್ಯೆ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಸಿಎಂ ಆದೇಶಿಸುತ್ತಾರೆ. ೬ ಲಕ್ಷ ರಾಜ್ಯ ಸರಕಾರಿ ನೌಕರರು, ೪.೫ ಲಕ್ಷ ಪಿಂಚಣಿದಾರರು, ೩ ಲಕ್ಷ ನಿಗಮ ಮಂಡಳಿಗಳ ನೌಕರಿಗೆ ಆರ್ಥಿಕ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು, ಎಲ್ಲ ಸಚಿವರಿಗೆ, ಅಧಿಕಾರಿಗಳಿಗೆ, ರಾಜ್ಯಾಧ್ಯಕ್ಷ ಷಡಾಕ್ಷರಿ, ಮಹಾ ಕಾರ್ಯದರ್ಶಿ ಜಗದೀಶ್ ಪಾಟೀಲ್, ಖಜಾಂಚಿ ಶ್ರೀನಿವಾಸ್ಗೆ ಹೊಳಲ್ಕೆರೆ ತಾಲೂಕು ನೌಕರರ ಸಂಘದ ಅಧ್ಯಕ್ಷ ಲೋಕೇಶ್ ಅಭಿನಂದಿಸಿದ್ದಾರೆ..
ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030