ಹೊನ್ನಾಳಿ ತಾಲೂಕಿನ ಹಿರೇಕಲ್ಮಠ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ .ಇವರ ಸಹಯೋಗದಲ್ಲಿ ಸಂಘಗಳಿಗೆ ಕಿರು ಉದ್ಯಮ ಸಾಲ ಹಾಗೂ ಸಮುದಾಯ ಬಂಡವಾಳ ನಿಧಿ ವಿತರಣಾ ಕಾರ್ಯಕ್ರಮವನ್ನು ಸನ್ಮಾನ್ಯ ಸಂಸದರಾದ ಶ್ರೀ ಜಿ ಎಂ ಸಿದ್ದೇಶ್ವರ್ ಅವರ ಹಾಗೂ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಎಂ ಪಿ ರೇಣುಕಾಚಾರ್ಯ ಅವರ ಉಪ ಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿತರಿಸಲಾಯಿತು.
ಒಟ್ಟಾರೆಯಾಗಿ 77 ಸಂಘಗಳಿಗೆ 6175000 ಚೆಕ್ ವಿತರಿಸಲಾಯಿತು ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 8. ಸಂಘಗಳಿಗೆ 1600000 ಚೆಕ್ ವಿತರಿಸಲಾಯಿತು ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷರು ಶ್ರೀಮತಿ ರಂಜಿತ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರು ಶ್ರೀಮತಿ ಉಮಾ ಓಂಕಾರ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಶ್ರೀಮತಿ ರೇಖಾ ಬಿಜೆಪಿ ಮಹಿಳಾ ಮಾರ್ಚ ಉಪಾಧ್ಯಕ್ಷರು ಶ್ರೀಮತಿ ರೇಣುಕಾ ಮಾಜಿ ಗ್ರಾಪಂ ಉಪಾದ್ಯಕ್ಷರಾದ ಶ್ರೀಮತಿ ಮಂಜುಳ . ಮತ್ತು ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸಿಡಿಪಿಒ ಶ್ರೀ ಮಹಾಂತಸ್ವಾಮಿ,
ಎನ್ ಆರ್ ಎಲ್ ಎಂ ಜಿಲ್ಲಾ ವ್ಯವಸ್ಥಾಪಕರಾದ ಬೋಜರಾಜ್ ತಾಲೂಕು ಸಂಯೋಜಕರಾದ ರಾಘವೇಂದ್ರ ಭಾಗವಹಿಸಿದ್ದರು .ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸದಸ್ಯರು ಹಾಗು ಎಮ್ ಬಿ ಕೆ ಮತ್ತು ಎಲ್ ಸಿ ಆರ್ ಪಿ ಉಪಸ್ಥಿತರಿದ್ದರು.
ವರದಿ. ಯುವರಾಜ್ ಹೊನ್ನಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030