ಶಿವಪುರ:ಲಾರಿ ಹರಿದು50ಕ್ಕೂ ಹೆಚ್ಚು ಕುರಿಗಳುಬಲಿ, 20ಕುರಿಗಳ ಸ್ಥಿತಿ ಗಂಭೀರ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮದ ಹೊರವಲಯದಲ್ಲಿ, ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕುರಿಹಿಂಡು ಹಾದು ಹೋಗುವ ಸಂದರ್ಭದಲ್ಲಿ.ಅತಿವೇಗವಾಗಿ ಬಂದ ಲಾರಿಯೊಂದು ಕುರಿಗಳ ಮೇಲೆ ಹರಿದ ಪರಿಣಾಮ,ಶಿವಪುರ ಗೊಲ್ಲರಹಟ್ಟಿ ರುದ್ರಪ್ಪ ಹಾಗೂ ಮಹಲಿಂಗಪ್ಪ ಎಂಬುವರಿಗೆ ಸೇರಿದ 50ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿಯೇ ಅಸುನೀಗಿದ್ದು 20ಕುರಿಗಳು ಮಾರಣಾಂತಿಕವಾಗಿ ಗಾಯಗೊಂಡಿವೆ.ಸ್ಥಳಕ್ಕೆ ಕೂಡ್ಲಿಗಿ ಹೈವೇ ಪೆಟ್ರೋಲ್ ಸಿಬ್ಬಂದಿ ಬೆಟ್ಟಿನೀಡಿದ್ದು,ಪ್ರಕರಣ ಕೂಡ್ಲಿಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಆ 31ರ ಬೆಳಿಗ್ಗೆ ಜರುಗಿದೆ.
ವರದಿ.ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030