ತುಂಗಭದ್ರಾ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ…!!!

Listen to this article

ತುಂಗಭದ್ರಾ ಪ್ರೌಢಶಾಲೆಯಲ್ಲಿ
ಗಣರಾಜ್ಯೋತ್ಸವ

ಹೂವಿನ ಹಡಗಲಿ: ಸಂವಿಧಾನದ ಆಶಯಗಳು
ಮೌಲ್ಯಗಳನ್ನು ಗಟ್ಟಿಗೊಳಿಸಲು ಯುವಪೀಳಿಗೆ ಪಣತೊಡಬೇಕೆಂದು
ತುಂಗಭದ್ರಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ
ಡಾ ಎಂ ಧರ್ಮಣ್ಣ ಹೇಳಿದರು.

ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬುಧವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನ ದೇಶದ ಪರಮೋಚ್ಚ ಗ್ರಂಥ. ಹಲವಾರು ದೇಶಗಳನ್ನು
ಸುತ್ತಿ ಅಂತಿಮವಾಗಿ ಉತ್ತಮ ಅಂಶಗಳನ್ನು ಅಳವಡಿಸಿದ ಕೀರ್ತಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.

ವೈವಿಧ್ಯಮಯ ಭಾರತದ
ಆಶೋತ್ತರಗಳಿಗೆ ಪೂರಕವಾದ ಸಾಮಾಜಿಕ
ಬದ್ಧತೆ ಸಂವಿಧಾನದಲ್ಲಿ
ಅಳವಡಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರುಗಳಾದ ಸುರೇಶ ಅಂಗಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದೆ.
ಅಧ್ಯಯನದ ಕಡೆ ಗಮನ ಕೊಟ್ಟು ಹೆಚ್ಚು ಅಂಕ ಗಳಿಸಿರಿ ಎಂದರು.

ದೈಹಿಕ ಶಿಕ್ಷಕ ‌‌ಸ್ವಾಮಿನಾಥ ರಾಮಸ್ವಾಮಿ ಚಿತ್ರಕಲಾ ಶಿಕ್ಷಕ ದ್ವಾರಕೀಶ್ ರೆಡ್ಡಿ
ಕಾರ್ಯಕ್ರಮ ನಿರ್ವಹಿಸಿದರು.

ಶಿಕ್ಷಕರಾದ ಕೆ ಬಸವರಾಜ
ಜಿ ಆನಂದ ಲಂಬಾಣಿ ಗಿಡ್ಡಾನಾಯ್ಕ್ ಪ್ರತಿಮಾ ಎನ್ ಗೀತಾ ಪಿ ಎಂ
ಸಂತೋಷ್ ಕುಮಾರ್ ಸೊಪ್ಪಿನ ಹಾಗೂ ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಜರಿದ್ದರು..

ವರದಿ.ಅಜಯ್, ಚ, ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend