ವರದಿ. ಮಂಜುನಾಥ್, ಎಚ್
ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯಲ್ಲಿ ಇಂದು ಜ,5 -2021 ನೇ ಶುಕ್ರವಾರದಂದು ಗ್ರಂಥಾಲಯ ವತಿಯಿಂದ ಓದುವ ಬೆಳಕು ಮತ್ತು ಮಕ್ಕಳ ಸ್ನೇಹಿ ಗ್ರಾಮ ಸಭೆ, ಮುಖ್ಯ ಬೀದಿಗಳಲ್ಲಿ ಘೋಷಣೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಮಕ್ಕಳು ಪ್ರಾರ್ಥನೆ ಮತ್ತು ರೈತ ಗೀತೆಯನ್ನು ಹಾಡಿದರು. ಗೋವಿಂದಪ್ಪ ಸರ್ ಸ್ವಾಗತ ಕೋರಿದರು. ಮುಖ್ಯಗುರುಗಳಾದ ಸೋಮಶೇಖರಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಶ್ರೀ ಕಂಪಳ ರಂಗ ಸ್ವಾಮಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಕರಿಬಸಪ್ಪ ಸರ್ ಇವರು ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿದರು.
ಕೆ.ಬಿ.ಕೆ ಹಟ್ಟಿಯ ಮುಖ್ಯ ಶಿಕ್ಷಕರಾದ ರವಿಕುಮಾರ್ ಸರ್ ಇವರು ಗ್ರಂಥಾಲಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ಮಕ್ಕಳಿಗೆ ತಿಳಿಸಿದರು. ಹೂಡೇಂ ವಲಯದ ಸಂಪನ್ಮೂಲ ಅಧಿಕಾರಿಗಳಾದ ತಿಪ್ಪೇಸ್ವಾಮಿ ಸರ್ ಇವರು ಓದುವ ಬೆಳಕು ಮತ್ತು ಮಕ್ಕಳ ಸ್ನೇಹಿ ಗ್ರಾಮಸಭೆಯ ಉದ್ದೇಶಗಳು ಮತ್ತು ಆಶಯಗಳ ಬಗ್ಗೆ ಮಾತನಾಡಿದರು. ಆರೋಗ್ಯ ಇಲಾಖೆಯ ಸ್ವಾಮಿ ಇವರು ಹೆಣ್ಣು ಮಕ್ಕಳ ಋತುಚಕ್ರದ ಶುಚಿತ್ವ ಹಾಗೂ ನಿರ್ವಹಣೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಕರಿಬಸಮ್ಮ ದುರುಗಪ್ಪ, ಉಪಾಧ್ಯಕ್ಷರಾದ ಶ್ರೀ ಕೆ. ಎನ್. ರಾಘವೇಂದ್ರ ಹಾಗೂ ಸದಸ್ಯರಾದ ನಾಗಮ್ಮ-ಗದ್ದಿಸ್ವಾಮಿ, ಪಾರ್ವತಮ್ಮ ಕ್ಯಾತಯ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾದ. ಚಿನ್ನೊಬಯ್ಯ ಮತ್ತು ತಾಯಕನಹಳ್ಳಿ ಸ.ಹಿ.ಪ್ರಾ ಶಾಲೆಯ ಬಡ್ತಿ ಮುಖ್ಯಗುರುಗಳಾದ ಡಿ. ಪಾಲಯ್ಯ ಮತ್ತು ಸುಟ್ಟ ಕರ್ನಾರಹಟ್ಟಿ ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕರು ಕರಿಬಸಮ್ಮ, ಹಾಗೂ ಚೌಟಯ್ಯನ ಹಟ್ಟಿ ಮುಖ್ಯ ಶಿಕ್ಷಕರಾದ ನಾಗರಾಜ್ ಸರ್, ಮತ್ತು ತಾಯಕನಹಳ್ಳಿ ಶಾಲೆಯ ಸಹ ಶಿಕ್ಷಕರಾದ ನಾಗನಗೌಡರು, ಹೂಡೇಂ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕರಾದ ಶಿವಪ್ರಸಾದ್, ಮಚ್ಚೇಂದ್ರಪ್ಪ, ಗೋವಿಂದಪ್ಪ ಸರ್, ಅನ್ನಪೂರ್ಣಮ್ಮ ಶಿಕ್ಷಕಿ, ನರಸಿಂಹ ರೆಡ್ಡಿ ಸರ್, ಬಿ. ಆರ್. ಮಂಜುಳಾ ಶಿಕ್ಷಕಿ, ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಹಾಂತೇಶ್ ಸ್ವಾಮಿ, ಕಾರ್ಯದರ್ಶಿಗಳಾದ ಚಂದ್ರಪ್ಪ, ಗ್ರಂಥಾಲಯ ಮೇಲ್ವಿಚಾರಕರು ತುಡುಮ ಗುರುರಾಜ್ ಮತ್ತು ಕಂಪ್ಯೂಟರ್ ಆಪರೇಟರ್ ತಿಪ್ಪೇಸ್ವಾಮಿ, ಗ್ರಾಮಪಂಚಾಯಿತಿ ಸಿಬ್ಬಂದಿ ವರ್ಗದವರು, ಪತ್ರಕರ್ತರಾದ ಎಚ್. ಮಂಜುನಾಥ್ ಹುಡೇಂ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಕಾರ್ಯಕರ್ತೆಯರು ಹಾಗೂ ವಿ ಡಬ್ಲ್ಯೂ ಆರ್ ಸಲ್ಮಾ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ,ಊರಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಚ್ಚೇಂದ್ರಪ್ಪ ಸರ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030