ಹಿರಿಯೂರಿನ ಬಾಪೂಜಿ ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಬಾಪೂಜಿ ಪ್ಯಾರಾಮೆಡಿಕಲ್ ಕಾಲೇಜು ವತಿಯಿಂದ ಏರ್ಪಡಿಸಿದ್ದ ಬಾಪೂಜಿ ಉತ್ಸವ 2022 ಕಾರ್ಯಕ್ರಮವನ್ನು ಮಾನ್ಯ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮತ್ತು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ ಜಿ ಎಸ್ ಮಂಜುನಾಥ್ ರವರು ಉದ್ಘಾಟನೆ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದಂತಹ ಡಿ ಸುಧಾಕರ್ ಅವರು ಮಾಜಿ ಸಂಸದರು ಹಾಲಿ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಬಿ ಎನ್ ಚಂದ್ರಪ್ಪನವರು ಚಳ್ಳಕೆರೆ ಶಾಸಕರಾದಂತಹ ಶ್ರೀ ಟಿ ರಘುಮೂರ್ತಿರವರು ಮಾಜಿ ಶಾಸಕರಾದಂತಹ ಮಾನ್ಯ ಶ್ರೀ ಬಿ ಜಿ ಗೋವಿಂದಪ್ಪನವರು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮುರುಳಿದರ ಹಾಲಪ್ಪನವರು ಚಿತ್ರದುರ್ಗ ದಾವಣಗೆರೆ ಸ್ಥಳೀಯ ಸಂಸ್ಥೆ ಅಭ್ಯರ್ಥಿಗಳಾಗಿದ್ದ ಬಿ ಸೋಮಶೇಖರ್ ಅವರು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಡಿ ಯಶೋಧರ್ ರವರು ನಿರ್ಮಿತಿ ಕೇಂದ್ರದ ಮೂಡಲಗಿರಿಪ್ಪನವರು ಮತ್ತು ಸಂಸ್ಥೆಯ ಕಾರ್ಯಕಾರಿ ಮಂಡಳಿಯವರು ಸಂಸ್ಥೆ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಹಾಗೂ ಪೋಷಕರು ಹಾಗೂ ಇನ್ನೂ ಅನೇಕ ಮಂದಿ ಗಣ್ಯರು ಹಾಜರಿದ್ದರು..
ವರದಿ. ಶಶಿಕುಮಾರ್. ಜೆ. ಸಿ. ಆಲೂರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030