ಸ್ವಾಭಿಮಾನ ಪ್ರಜಾಪ್ರಭುತ್ವದ ಗೆಲವು ಎಂದ ಮತದಾರ..!!
ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ಆಸಕ್ತಿದಾಯಕ ಸ್ಪರ್ಧೆಯನ್ನು ಏರ್ಪಟ್ಟಿತು. IND ನ ಲತಾ ಮಲ್ಲಿಕಾರ್ಜುನ್ 70000 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿ ಜಯದ ನಗೆಯನ್ನ ಬಿರಿದ್ರೆ. ಬಿಜೆಪಿಯ ಕರುಣಾಕರ ರೆಡ್ಡಿ 56000 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡ್ರೆ ಕಾಂಗ್ರೆಸ್ ಅಭ್ಯರ್ಥಿ ಎನ್.ಕೊಟ್ರೇಶ್ 44,988 ಮತಗಳನ್ನ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ …ಆದರೆ ಜೆಡಿಎಸ್ ಅಭ್ಯಾರ್ಥಿ ಮಾತ್ರ ತೀರ ಕಡಿಮೆ ಮತಗಳನ್ನ ಪಡೆದು ಮುಖಭಂಗವನ್ನ ಅನುಭವಿಸಿದ್ದಾರೆ..
ಇನ್ನು ರಾಷ್ಟ್ರೀಯ ಪಕ್ಷಗಳನ್ನ ಸವಾಲನ್ನ ಒಡ್ಡಿ ಗೆದ್ದಂತಹ ಲತಾ ಮಲ್ಲಿಕಾರ್ಜುನ ಇದು ಸ್ವಾಭಿಮಾನದ ಪ್ರಜಾಪ್ರಭುತ್ವದ ಕಾರ್ಯಕರ್ತರ ಗೆಲವು ಎಂದು ಸಂತಸವನ್ನ ವ್ಯಕ್ತಪಡಿಸಿದ್ದಾರೆ…
ವರದಿ. ಆಶೀಪುಲ್ಲ ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030