ಕೂಡ್ಲಿಗಿ:43.704ಮತಗಳ ಅಂತರದಲ್ಲಿ ಗೆದ್ದ ಡಾ” ಎನ್.ಟಿ.ಶ್ರೀನಿವಾಸ್, ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು.
ವಿಜಯನಗರ ಜಿಲ್ಲೆ ಕೂಡ್ಲಿಗಿ: ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ”ಎನ್.ಟಿ.ಶ್ರೀನಿವಾಸರವರು, ಪ್ರತಿಸ್ಪರ್ಧಿ ಲೋಕೇಶ ವಿ ನಾಯಕ ರವರಿಗಿಂತ 43.704 ಮತಗಳ ಅಂತರದಲ್ಲಿ ವಿಜಯಸಾಧಿಸಿದ್ದಾರೆ. ಮೇ13ರಂದು ಮತ ಎಣಿಕೆ ಪೂರ್ಣಗೊಂಡಾಗ, ಹೊರ ಬಿದ್ದ ವಿಜಯದ ಸುದ್ದಿ ತಿಳಿದ ಕಾಂಗ್ರೇಸ್ ಆಭ್ಯರ್ಥಿಎನ್.ಟಿ.ಶ್ರೀನಿವಾಸರವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಕೂಡ್ಲಿಗಿ ಪಟ್ಟಣ ಹಾಗೂ ತಾಲೂಕಿನ ಎಲ್ಲೆಡೆಗಳಲ್ಲಿ ಸಿಹಿ ಹಂಚಿ ಸಂಭ್ರಮ ಆಚರಿಸಲಾಗಿದೆ. ಕಾರ್ಯಕರ್ತರು ಹಾಗೂ ಅಭಿಮಾನಿಗಳು, ಸಿಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲೆಡೆಗಳಲ್ಲಿ, ಪಕ್ಷದ ಹಾಗೂ ಶ್ರೀನಿವಾಸರ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕೂಡ್ಲಿಗಿ ಪಟ್ಟಣದ ಮದಕರಿ ವೃತ್ತದಲ್ಲಿ , ಕಾಂಗ್ರೇಸ್ ಮುಖಂಡರ ನೇತೃತ್ವದಲ್ಲಿ. ಡಾ”ಎನ್.ಟಿ.ಶ್ರೀನಿವಾಸ ಅಭಿಮಾನಿಗಳು, ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು. ನೆರೆದವರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದರು, ಮತ್ತು ಬಣ್ಣ ಬಣ್ಣದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಭಾಗದಿಂದ ಆಗಮಿಸಿದ್ದ, ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಎನ್.ಟಿ. ಶ್ರೀನಿವಾಸರವರ ಅಭಿಮಾನಿಗಳು ವಿಜಯೋತ್ಸವದಲ್ಲಿದ್ದರು…
ವರದಿ. ವೃಷಬೇಂದ್ರಿ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030