ಹೆಚ್.ಬಿ.ಹಳ್ಳಿ:ಪುರಸಭೆ ಚುನಾವಣೆ,ಹಾಲಿ ಮಾಜಿ ಶಾಸಕರ ಗಳ ಹಾಣಾಹಣಿ…!!!

Listen to this article

ಹೆಚ್.ಬಿ.ಹಳ್ಳಿ:ಪುರಸಭೆ ಚುನಾವಣೆ,ಹಾಲಿ ಮಾಜಿ ಶಾಸಕರ ಗಳ ಹಾಣಾಹಣಿ.

ಹಗರಿಬೊಮ್ಮನಹಳ್ಳಿಯಲ್ಲಿ ಜರುಗಿದ ಪುರಸಭೆ ಚುನಾವಣೆ ಸಂದರ್ಭದಲ್ಲಿ,20-21ಮತ ಕೇಂದ್ರದ ಹೊರ ಆವರಣದಲ್ಲಿ ಹಾಲಿ ಶಾಸಕ ಭೀಮಾನಾಯ್ಕ ಹಾಗೂ ಸಹಚರರು ಮಾಜಿ ಶಾಸಕ ನೇಮಿರಾಜ ನಾಯ್ಕ ಹಾಗೂ ಸಹಚರರ ನಡುವೆ ತೀವ್ರ ವಾಗ್ವಾದ ನಡೆದಿದೆ.ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಹಾಗೂ ಕರ್ಥವ್ಯದಲ್ಲಿದ್ದ ಸಿಪಿಐರವರೆಲ್ಲರೂ, ಪಿಎಸ್ಐ ರವರು ದೌಡಾಯಿಸಿ ಮನ ಒಲಿಸಿ ಇಬ್ಬರು ರಾಜಕಾರಣಿಗಳನ್ನು ಸಮಾಧಾನ ಪಡಿಸಿದರು,ಕಾರ್ ನಲ್ಲಿದ್ದ ಅವರನ್ನು ಹಾಗೂ ಅವರ ಬೆಂಬಲಿಗರನ್ನು ಡಿವೈಎಸ್ಪಿ ಜಿ.ಹರೀಶರೆಡ್ಡಿ ಸ್ಥಳದಿಂದ ತೆರವುಗೊಳಿಸಿದರು. ನೆರೆದಿದ್ದ ಗುಂಪನ್ನು ಚದುರಿಸಲು ಪೊಲೀಸರು ತಾಸು ಶ್ರಮಿಸಿದರು. ಸಿಆರ್ಪಿ ತುಕಡಿ ದಾವಿಸಿ ಮತಕೇಂದ್ರದ ಸುತ್ತ ಇದ್ದ ಜನ ಸಂದಣಿಯನ್ನ ತೆರವು ಗೊಳಿಸಿದರು ಹಾಗೂ ಪರಿಸ್ಥಿತಿ ತಿಳಿಗೊಳಿಸಿದರು, ವಿಷಯ ತಿಳಿದ ಕೂಡಲೆ ಘಟನೆ ನಂತರ ಚುನಾವಣಾ ಪರಿವೀಕ್ಷಣಾಧಿಕಾರಿ ಪರಿಶೀಲಿಸಿದರು.ನಂತರ ಸ್ಥಳಕ್ಕೆ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅರುಣ ಕುಮಾರ್ ರವರು ದಾವಿಸಿದರು,ಪರಿಶೀಲಿಸಿ ಘಟನೆ ಬಗ್ಗೆ ಕರ್ಥವ್ಯದಲ್ಲಿದ್ದ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.ಎನ್ನುವ ಒಂದು ಸುದ್ದಿ ತಿಳಿದುಬಂದಿದೆ…

ವರದಿ. ಎಚ್ಚರಿಕೆ ಕನ್ನಡ ನ್ಯೂಸ್ ವರದಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend