ರಾಷ್ಟ್ರೀಯತೆ ಮೇಲೆ ಭಾರತ ನಿಂತ್ತಿದೆ ನಾಗರಾಜ
ಸಿಂಧನೂರ ಅ.2 ರಾಷ್ಟ್ರೀಯತೆ ಮೇಲೆ ಇಂದು ಭಾರತ ನಿಂತಿದ್ದು ಎಲ್ಲರೂ ತಮ್ಮ ಸ್ವಾರ್ಥ ಬಿಟ್ಟು ದೇಶಕ್ಕಾಗಿ ದುಡಿದಿದ್ದಾರೆ. ಅಂಥವರಿಂದ ಇಂದು ದೇಶ ಇಲ್ಲಿ ತನಕ ಬಲಿಷ್ಠವಾಗಿದೆ ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ದೇಶ ಸೇವೆಗಾಗಿ ಮುಂದಾಗ ಬೇಕು ಇದರಿಂದ ನಾವು ಇಟ್ಟುಕೊಂಡ ವಿಶ್ವ ಗುರಿ ಬಾರತ ಈಡೇರುತ್ತದೆ ಎಂದು ಪ್ರಾಂಥ ಸಂಯೋಜಕ ರಾದ ಪಾ.ನಾಗರಾಜ ಹುಬ್ಬಳ್ಳಿ ಮಾತನಾಡಿದರು.
ನಗರದಲ್ಲಿ ವಿವಿಧ ರಸ್ತೆಗಳಲ್ಲಿ ಆರ್.ಎಸ್.ಎಸ್ ಪಥ ಸಂಚಲನ ನಂತರ ಆರ್. ಜಿ .ಎಂ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಬೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ದಿಂದ ನಗರದಲ್ಲಿ ಆಕರ್ಷಕ ಪಥಸಂಚಲ ನಡೆಯಿತು ನೆರೆದಿದ್ದ ಜನರು ಗಣವೇಶದಾರಿಗಳಿಗೆ ಪುಷ್ಪಾಂಜಲಿ ನೀಡಿ ಗೌರವ ಸೂಚಿಸಿದರು.
ನಗರದ ಆರ್ ಜಿ ಎಂ .ಶಾಲೆಯಿಂದ ಹೊರಟ ಆರ್ ಎಸ್ ಎಸ್ ಪಥ ಸಂಚಲನ ಗಾಂಧಿ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಸಂಚರಿಸಿ ಆಕರ್ಷಕ ಪಥಸಂಚಲನ ನಡೆಸಿಯಿತು
ಕಳೆದ ಬಾರಿಗಿಂತ ಈ ಸಲದ ಪಥ ಸಂಚಲನ ದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗಣವೇಶದಾರಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಡಾ.ಚನ್ನನಗೌಡ ಪ್ರಹ್ಲಾದ ಕೆಂಗಲ್,ವಿರೇಶ ಇಲ್ಲೂರ,ತಿಮ್ಮಣ್ಣದಾಸರ ನಿರುಪಾದಪ್ಪ ಜೋಳದರಾಸಿ,ಬಸವಲಿಂಗ ಜವಳ ಗೇರಾ, ಗುರುಸ್ವಾಮಿ ಜವಳಗೇರಾ, ಪರಶುರಾಮ ಕಾಟ್ವಾ,ಹಟ್ಟಿ ಹನುಮಂತ,ಸಂತೋಷ ಚಿರಂಜೀವಿ ರೆಡ್ಡಿ,ವೆಂಕಟೇಶ ಬನ್ನದ,ಸಿದ್ದು ಮದರ ಗಂಡಿ,ಬಸವರಾಜ ಬಂಗಾರಶೆಟ್ಟರ,ಹನಮೇಶ ವಾಲೇಕಾರ,ಸತೀಶ ಸೇರಿದಂತೆ ಇನ್ನಿತರಪ್ರಮುಖರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಗಾಂಧಿವೃತದಲ್ಲಿ ಮಾಜಿ ಸಂಸದರಾದ ಕೆ. ವಿರುಪಾಕ್ಷಪ್ಪ,ಕಾಡಾ ಅದ್ಯಕ್ಷ ಕೊಲ್ಲಾಶೇಷಗಿರಿರಾವು ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮಧ್ವಾರಾಜ ಆಚಾರ್ಯ,ಸೇರಿದಂತೆ ಇನ್ನಿತರ ಬಿಜೆಪಿಯ ಮುಖಂಡರು ಭಗವದ್ ದ್ವಜಕ್ಕೆ ಪುಷ್ಪಾಂಜಲಿ ಸಲ್ಲಿಸಿ ಗೌರವ ಸಲ್ಲಿಸಿದರು.ಯಾವುದೆ ಅಹಿತಕರ ಘಟನೆ ನಡೆಯದಂತೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸರ ನಿಯೋಜನೆ ಯನ್ನು ಮಾಡಲಾಗಿತ್ತು. ಸಿಪಿಐ ರವಿಕುಮಾರ ಪಿಎಸ್ಐ ಬಸವರಾಜ ಸೇರಿದಂತೆ ಅದಿಕಾರಿಗಳು ಸೂಕ್ತ ಬಂದೋಬಸ್ತ್ ಮಾಡಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030