ಶ್ರೀಪುರಂಜಂಕ್ಷನ್ ಬಳಿ ಬೈಕಗೆ ಲಾರಿ ಡಿಕ್ಕಿ ಸ್ಥಳದಲ್ಲಿ ಸಾವು…!!”

Listen to this article

ಶ್ರೀಪುರಂಜಂಕ್ಷನ್ ಬಳಿ ಬೈಕಗೆ ಲಾರಿ ಡಿಕ್ಕಿ ಸ್ಥಳದಲ್ಲಿ ಸಾವು.

ಸಿಂಧನೂರು : ಸ.9 .ತಾಲೂಕಿನ ಶ್ರೀಪುರಂಜಂಕ್ಷನ್ ಬಳಿ ಬೈಕ್ ಹಾಗೂ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಇಂದು ಬೆಳಗಿನ ಜಾವ 05 – 30 ರ ಸುಮಾರಿಗೆ ನಡೆದಿದೆ.

ಕಾರಟಗಿ ತಾಲ್ಲೂಕಿನ ಬೂದುಗುಂಪಾ ಪಂಚಾಯಿತಿ ವ್ಯಾಪ್ತಿಯ ಹಾಲಸಮುದ್ರ ಗ್ರಾಮದ ಈತೀಷ ತಂದೆ ಶರಣಪ್ಪ ವಯಸ್ಸು 22 ಕಾರಟಗಿಯಿಂದ ಸಿಂಧನೂರಿಗೆ ಕೆ.ಎ-36 ಇಡಬ್ಲೂ -8022 ನಂಬರಿನ ಬೈಕ್ ನಲ್ಲಿ ಬರುವಾಗ ಬೆಂಗಳೂರಿನಿಂದ ಕಟ್ಟಿಗೆ ತುಂಬಿಕೊಂಡು ಗಂಗಾವತಿ ರಸ್ತೆ ಮಾರ್ಗವಾಗಿ ಸಿಂಧನೂರಿಗೆ ತೆರಳುತ್ತಿದ್ದ ಕೆಎ-52 ಎ-6373 ಲಾರಿ ಚಾಲಕನ ನಿಯಂತ್ರಣ ತಪ್ಪಿ ಶ್ರೀಪುರಂ ಜಂಕ್ಷನ್ ಬಳಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವನಪ್ಪಿದ್ದಾನೆ.

ಅಪಘಾತ ನಡೆದ ಸ್ಥಳಕ್ಕೆ ಪೋಲೀಸರು ಬೇಟಿ ನೀಡಿ ವಿಚಾರಣೆ ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಅಪಘಾತ ನಡೆದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.

ಲಾರಿ ಚಾಲಕನನ್ನು ಪೋಲಿಸ್ ವಶಕ್ಕೆ ಪಡೆದಿದ್ದು ನಾಗರಾಜ ತಂದೆ ಬುಡಯ್ಯ ಅಂದನಗೌಡ ಪಾಳ್ಯ ಗಾಯತ್ರಿ ನಗರ ಬೆಂಗಳೂರು ಎಂದು ತಿಳಿದು ಬಂದಿದೆ.ಈ ಸಂದರ್ಭದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend