ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಗುಲಾಮಗಿರಿಗೆ ತಳ್ಳುತ್ತಿದ್ದಾರೆ.-ಬ.ಬಾದರ್ಲಿ.
ಸಿಂಧನೂರು : ಜುಲೈ. 26. ನರೇಂದ್ರ ಮೋದಿ ಹಾಗೂ ಅಮೀತ್ ಷಾ ರವರು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ಐಟಿ, ಸಿಬಿಐ, ಇಡಿ, ದಂಡೇ ಬರಲಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೆಲ್ಲರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಬೆನ್ನಿಗೆ ಇರುತ್ತೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಹೇಳಿದರು.
ಸೋನಿಯಾ ಗಾಂಧಿ ಅವರಿಗೆ ತನಿಖಾ ಸಂಸ್ಥೆಗಳ ಮುಖಾಂತರ ಕಿರುಕುಳ ನೀಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ನಗರದ ತಹಶೀಲ್ ಕಾರ್ಯಾಲಯದ ಮುಂದೆ ಮೌನ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ,ರಾಹುಲ್ ಗಾಂಧಿ ಯವರ ಮೇಲೆ ಯಾವುದೇ ಪ್ರಕರಣ ದಾಖಲಿಸದೇ 50 ತಾಸುಗಳ ಕಾಲ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ಆಪಾದನೆ ಹೊರಿಸಿ ಇಡಿ ತನಿಖೆ ಆರಂಭಿಸಿರುವುದು ಖಂಡನೀಯ.ಇಲ್ಲಸಲ್ಲದ ಅರೋಪಗಳಿಂದ ಕಾಂಗ್ರೆಸ್ ಬಲವನ್ನು ಕುಂದಿಸಲು ಬಿಜೆಪಿ ಸರ್ಕಾರ ಶತಪ್ರಯತ್ನ ಮಾಡುತ್ತಿದೆ. ಆದರೆ, ಅದು ಎಂದಿಗೂ ಕೈಗೂಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ ರಾಗಲಪರ್ವಿ, ಎಚ್ ಎನ್ ಬಡಿಗೇರ್ ಶಿವಕುಮಾರ್ ಜವಳಿ, ಮೂಕಣ್ಣ ವೆಂಕಟೇಶ್ವರ ಕ್ಯಾಂಪ್,ಖಾಜಾಹುಸೇನ್ ರೌಡ್ಕುಂದ, ಶರಣಯ್ಯ ಸ್ವಾಮಿ,ಯಂಕನಗೌಡ ಗಿಣಿವಾರ, ಅಮರೇಶ ಗಿರಿಜಾಲಿ,ಯೂನುಸ್ ಪಾಷಾ ದಡೇಸುಗೂರು ದಾದಾಪೀರ್,ವಿರಾಜು ಬುದಿವಾಳ ಕ್ಯಾಂಪ್, ಹಂಪಮ್ಮ ವಲ್ಕOದಿನ್ನಿ, ಮಹಿಳಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷೆ ಇಂದುಮತಿ, ಆಯಿಷಾ ಬೇಗಂ, ಅನ್ನಪೂರ್ಣಮ್ಮ, ಮಲ್ಲಯ್ಯ ಮ್ಯಾಕಲ್, ಹನುಮಂತ ಕರ್ನಿ, ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ, ಕಿರಿಯ ಮುಖಂಡರು, ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಸಿಂಧನೂರು : ಜುಲೈ. 26. ನರೇಂದ್ರ ಮೋದಿ ಹಾಗೂ ಅಮೀತ್ ಷಾ ರವರು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ಐಟಿ, ಸಿಬಿಐ, ಇಡಿ, ದಂಡೇ ಬರಲಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೆಲ್ಲರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಬೆನ್ನಿಗೆ ಇರುತ್ತೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಹೇಳಿದರು.
ಸೋನಿಯಾ ಗಾಂಧಿ ಅವರಿಗೆ ತನಿಖಾ ಸಂಸ್ಥೆಗಳ ಮುಖಾಂತರ ಕಿರುಕುಳ ನೀಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ನಗರದ ತಹಶೀಲ್ ಕಾರ್ಯಾಲಯದ ಮುಂದೆ ಮೌನ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ,ರಾಹುಲ್ ಗಾಂಧಿ ಯವರ ಮೇಲೆ ಯಾವುದೇ ಪ್ರಕರಣ ದಾಖಲಿಸದೇ 50 ತಾಸುಗಳ ಕಾಲ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ಆಪಾದನೆ ಹೊರಿಸಿ ಇಡಿ ತನಿಖೆ ಆರಂಭಿಸಿರುವುದು ಖಂಡನೀಯ.ಇಲ್ಲಸಲ್ಲದ ಅರೋಪಗಳಿಂದ ಕಾಂಗ್ರೆಸ್ ಬಲವನ್ನು ಕುಂದಿಸಲು ಬಿಜೆಪಿ ಸರ್ಕಾರ ಶತಪ್ರಯತ್ನ ಮಾಡುತ್ತಿದೆ. ಆದರೆ, ಅದು ಎಂದಿಗೂ ಕೈಗೂಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ ರಾಗಲಪರ್ವಿ, ಎಚ್ ಎನ್ ಬಡಿಗೇರ್ ಶಿವಕುಮಾರ್ ಜವಳಿ, ಮೂಕಣ್ಣ ವೆಂಕಟೇಶ್ವರ ಕ್ಯಾಂಪ್,ಖಾಜಾಹುಸೇನ್ ರೌಡ್ಕುಂದ, ಶರಣಯ್ಯ ಸ್ವಾಮಿ,ಯಂಕನಗೌಡ ಗಿಣಿವಾರ, ಅಮರೇಶ ಗಿರಿಜಾಲಿ,ಯೂನುಸ್ ಪಾಷಾ ದಡೇಸುಗೂರು ದಾದಾಪೀರ್,ವಿರಾಜು ಬುದಿವಾಳ ಕ್ಯಾಂಪ್, ಹಂಪಮ್ಮ ವಲ್ಕOದಿನ್ನಿ, ಮಹಿಳಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷೆ ಇಂದುಮತಿ, ಆಯಿಷಾ ಬೇಗಂ, ಅನ್ನಪೂರ್ಣಮ್ಮ, ಮಲ್ಲಯ್ಯ ಮ್ಯಾಕಲ್, ಹನುಮಂತ ಕರ್ನಿ, ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ, ಕಿರಿಯ ಮುಖಂಡರು, ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030