ಚಂದ್ರಶೇಖರಪುರದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ
ಕೂಡ್ಲಿಗಿ ತಾಲೂಕಿನ ಚಂದ್ರಶೇಖರ ಪುರದಲ್ಲಿ ಕಾರ್ಗಿಲ್ ವಿಜಯೋತ್ಸವದ ದಿನದ ಕಾರ್ಯಕ್ರಮದಲ್ಲಿ ಮುಖಂಡರು ಹಾಗೂ ನಟರು ಬಂಗಾರು ಹನುಮಂತು ಉದ್ಘಾಟನೆ ಮಾಡಿ ನಂತರ ಮಾತನಾಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿಗೂ ಸಾವಿರಾರು ಸೈನಿಕರು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದಾರೆ. ಯೋಧರು ಅತಿಯಾದ ಚಳಿಯಿಂದ ಕೂಡಿದ ಹವಾಮಾನವನ್ನೂ ಲೆಕ್ಕಿಸದೆ ದೇಶದ ಗಡಿಭಾಗವನ್ನು ರಕ್ಷಿಸುತ್ತಿದ್ದಾರೆ. ಸೈನಿಕರ ಈ ತ್ಯಾಗದ ಫಲವಾಗಿ ದೇಶ ಸುರಕ್ಷಿತವಾಗಿದೆ ಎಂದು ನುಡಿದರು.. ಇದೇ ಸಂದರ್ಭದಲ್ಲಿ ಎಸ್ ಹಿರೇಮಠ ಸಂಸ್ಥಾನದ ಶ್ರೀ ಪ್ರಸಂತಾ ಸಾಗರ ಸ್ವಾಮೀಜಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ವಿವೇಕಾನಂದರವರು ಉಪನ್ಯಾಸವನ್ನು ಮಾಡಿದರು, ಹಿಂದೂ ಜಾಗರಣ ವೇದಿಕೆಯ ಯುವಕರೊಂದಿಗೆ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.ಅವರ ಸಾಹಸವನ್ನು
ನೆನಪಿಸಿಕೊಂಡರು ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿ ಅವರ ಸಾಹಸವನ್ನು ನೆನಪಿಸಿಕೊಂಡರು. ಶಾಲಾ ಮಕ್ಕಳಿಂದ ನಾನಾ ರೀತಿಯ ನೃತ್ಯ ವೇಷ ಭೂಷಣಗಳು ಈ ಕಾರ್ಯಕ್ರಮದಲ್ಲಿ ಜರುಗಿದವು…
ವರದಿ. ವಿರೇಶ್, ಕೆ, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030