ಅಹಾರ ಪದಾರ್ಥಗಳ ಮೇಲೆ ಶೇ 5% ರಷ್ಟು ತೆರಿಗೆ
ವಾಪಸು ಪಡೆಯಲು ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷ ಒತ್ತಾಯ.
ಸಿಂಧನೂರು : ಜುಲೈ19.ಅಹಾರ ಪದಾರ್ಥಗಳ ಮೇಲೆ ಶೇ 5% ರಷ್ಟು ತೆರಿಗೆಯನ್ನು ಹಾಕಿದ ಕೇಂದ್ರ ಸರಕಾರ, ಅನ್ನದ ಮೇಲೆ ಸುಂಕದ ತೆರಿಗೆ ಕಟ್ಟಿ ಊಟ ಮಾಡುವಂತ ದಯನೀಯ ಸ್ಥಿತಿ ಭಾರತದ ಜನರದ್ದಾಗಿದೆ. ಮೋದಿಯ ಕೇಂದ್ರ ಸರಕಾರ ಜಾರಿಗೆ ತಂದ ಜಿಎಸ್ ಟಿಯನ್ನು ಕೂಡಲೇ ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಪತ್ರಿಕೆ ಹೇಳಿಕೆ ಮೂಲಕ ಒತ್ತಾಯಿಸಿದರು.
ಉಪ್ಪಿನ ಸತ್ಯಾಗ್ರಹಕ್ಕೆ ಗೌರವ ನೀಡಿ ಉಪ್ಪಿನ ಮೇಲೆ ಬ್ರಿಟಿಷರು ತೆರಿಗೆಯನ್ನು ಹಾಕಲಿಲ್ಲ. ಈಗ ಬಿಜೆಪಿಯವರು ಮಂಡಕ್ಕಿ(ಮಂಡಾಳು) ಸೇರಿದಂತೆ ಉಪ್ಪು ಹಾಗೂ ಎಲ್ಲಾ ಆಹಾರ ಪದಾರ್ಥಗಳ ಮೇಲೆ ತೆರಿಗೆಯನ್ನು ಹಾಕಿದೆ. ಈಗಾಗಲೇ ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟು ಇದ್ದು ಮತ್ತದರ ಮೇಲೆ ಶೇ 5% ತೆರಿಗೆ ಹಾಕಿದ್ದು ಬ್ರಿಟಿಷ್ ಸರಕಾರದ ದಾಖಲೆ ಮೀರಿಸಿದ ಕುಖ್ಯಾತಿ ಬಿಜೆಪಿಯದಾಗಿದೆ ಎಂದ ಅವರು ಈಗಾಗಲೇ ದೇಶದ ವರ್ತಕರು, ಸಣ್ಣ-ಪುಟ್ಟ ವ್ಯಾಪಾರಿಸ್ಥರು ಜಿಎಸ್ ಟಿಯನ್ನು ವಿರೋಧಿಸಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ನಮ್ಮ ಸಿಪಿಐಎಂಎಲ್ ಪಕ್ಷ ಶೇ 5% ಜಿಎಸ್ ಟಿ ವಿರುದ್ಧ ಅಷ್ಟೇ ಅಲ್ಲಾ ಒಟ್ಟಾರೆ ಜಿಎಸ್ ಟಿ ಬೆಡವೇ ಬೇಡವೆಂದು ಬೀದಿಗಿಳಿದು ಜನತೆ ಹೋರಾಡಲು ಕರೆ ನಿಡುತ್ತದೆ.
ಈ ಬೆಲೆ ಏರಿಕೆ ಕುರಿತು ಶೀಘ್ರವಾಗಿ ಎಲ್ಲಾ ಸಮಾನ ಮನಸ್ಕ ಪಕ್ಷಗಳ ಹಾಗೂ ಸಂಘ ಸಂಸ್ಥೆಗಳ ಸಭೆಯನ್ನು ಕರೆದು ಜನ ವಿರೋಧಿ ಮೋದಿ ಸರಕಾರದ ವಿರುದ್ಧ ಹೋರಾಟ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತದೆ ಎಂದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030