ಅಕ್ರಮ ಮರಳಿನ ಬಂಡಿ ಲಾರಿಗಳು ಡಿಕ್ಕಿ, ಒರ್ವ ಸ್ಥಳದಲ್ಲಿ ಸಾವು.
ಸಿಂಧನೂರ : ಜುಲೈ 15 ಅಕ್ರಮ ಮರಳಿನ ಬಂಡಿ ಹಾಗೂ ಸಿಮೆಂಟ ಮತ್ತು ಆಯಿಲ್ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಒರ್ವ ಸ್ಥಳದಲ್ಲಿಸಾವನ್ನಪ್ಪಿದ್ದು, ಇನ್ನುಳಿದವರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ನಗರದ ಪಿ.ಡಬ್ಲೂ.ಡಿ. ಕ್ಯಾಂಪಿನ ಮೌಂಟೆಸ್ಸರಿ ಪಬ್ಲಿಕ್ ಶಾಲೆಯ ಹತ್ತಿರ ಇಂದು ಬೆಳಗಿನ ಜಾವ 6 ಗಂಟೆಗೆ ಸಂಭವಿಸಿದೆ.
ಗುಲ್ಬರ್ಗದ ಮಳಖೇಡ ದಿಂದ ಸಿಮೆಂಟ ತುಂಬಿದ ಲಾರಿ ಹೊಸಪೇಟೆಗೆ ಹೊರಟಿದ್ದು ಹಾವೇರಿಯಿಂದ ಆಯಿಲ್ ತುಂಬಿದ ಲಾರಿ ಹೈದರಾಬಾದಗೆ ಹೊರಟಿದ್ದು ಎದುರಿಗೆ ಮರಳು ತುಂಬಿದ ಎತ್ತಿನ ಬಂಡಿಯನ್ನು ರಕ್ಷಣೆ ಮಾಡಲು ಹೋಗಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಮಳಖೇಡ ಲಾರಿಯ ಮಾಲಿಕ ರವಿಕುಮಾರ 30 ವರ್ಷ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಲಾರಿಯಲ್ಲಿದ್ದ ಮಳಖೇಡ ಲಾರಿಯ ಚಾಲಕ ಸಿದ್ದು ಹಾಗೂ ಹಾವೇರಿ ಲಾರಿಯ ಚಾಲಕ ಇಮ್ರಾನ್ 30 ವರ್ಷ ನೂರುಲ್ಲಾ 35 ವರ್ಷ ಎತ್ತಿನ ಬಂಡಿ ಮಾಲಿಕ ರಂಗಪ್ಪ 50 ವರ್ಷ ಗಂಭೀರ ಸ್ವರೂಪದ ಗಾಯಗಳಾಗಿವೆ.
ಎತ್ತಿನ ಬಂಡಿ ಹಾಗೂ ಎರಡು ಲಾರಿಗಳು ಸಂಪೂರ್ಣ ಜಖಂಗೊಂಡಿದ್ದು ಎರಡು ಎತ್ತುಗಳಿಗೆ ಸಹ ಗಾಯಗೊಂಡಿವೆ ಸಿದ್ದು, ನೂರುಲ್ಲಾ, ಇಮ್ರಾನ ಗೆ ತೀರ್ವ ಗಾಯಗೊಂಡಿದ್ದು ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಪೋಲಿಸರು ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕಳಿಸಲಾಗಿದೆ ಅಪಘಾತ ನಡೆದ ರಾಯಚೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸಂಚಾರಿ ಠಾಣೆಯ ಪಿಎಸ್ಐ ಬಸವರಾಜ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.ಈ ಕುರಿತು ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಬಸವರಾಜ ಪತ್ರಿಕೆಗೆ ತಿಳಿಸಿದರು. ಮುಂಜಾನೆ ನಡೆದ ಅಪಘಾತ ಸುದ್ದಿ ಕೇಳಿದ ನಗರದ ಜನತೆ ಭಯ ಬೀತರಾಗಿ ಇದು ಅಪಘಾತದ ಶುಕ್ರವಾರವಾಗಿದೆ ಮಾತನಾಡಿಕೊಂಡರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030