ಸಿಂಧನೂರು : ಶರದ್ ಪವಾರ್ ಬಡವರಿಗೆ ದಾರಿದೀಪ – ಹರೀಶ್ ಕುಮಾರ್
ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಶರದ್ ಪವಾರ್ ಅಭಿಮಾನ ಬಳಗದ ವತಿಯಿಂದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಶರದ್ ಪವಾರ್ ಅವರ ಹುಟ್ಟುಹಬ್ಬವನ್ನು ಆಶ್ರಮದಲ್ಲಿ ಮಹಾಪ್ರಸಾದ ಮಾಡಿಸಿ ಎಲ್ಲಾ ವೃದ್ಧರು ಹಾಗೂ ಬುದ್ಧಿಮಾಂದ್ಯರಿಗೆ ಹಣ್ಣು-ಹಂಪಲುಗಳನ್ನು ವಿತರಿಸುವ ಮೂಲಕ ನ್ಯಾಷನಲ್ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಹರೀಶ್ ಅವರ ನೇತೃತ್ವದಲ್ಲಿ ಆಚರಿಸಲಾಯಿತು. ಈ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಎಲ್ಲಾ ಅನಾಥ ವೃದ್ಧರು ಹಾಗೂ ವಯಸ್ಕರ ಬುದ್ಧಿಮಾಂದ್ಯರು ಶರದ್ ಪವಾರ್ ಅವರಿಗೆ ದೇವರು ಇನ್ನೂ ಹೆಚ್ಚಿನ ಸಕಲ ಐಶ್ವರ್ಯ ಸಿರಿ ಸಂಪತ್ತು ಆಯಸ್ಸು ಆರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ರಾಜಕೀಯ ಮಟ್ಟದಲ್ಲಿ ಇನ್ನೂ ಉತ್ತಮ ಸ್ಥಾನಮಾನವನ್ನು ಹೊಂದಿ ಬಡವರ ಸೇವೆಗಾಗಿ ಅನಾಥರ ಸೇವೆಗಾಗಿ ದುಡಿಯುವಂತಹ ಶಕ್ತಿಯನ್ನು ಕರುಣಿಸಿರಿ ಎಂದು ಬೇಡಿಕೊಂಡು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭಹಾರೈಸಿ ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್.ಸಿ.ಪಿ. ಪಕ್ಷದ ರಾಜ್ಯಾಧ್ಯಕ್ಷರಾದ ಹರೀಶ್ ಅವರು ಶರದ್ ಪವಾರ್ ಅವರು ಬಡವರಿಗೆ ಸ್ಪಂದಿಸುವ ಮಹಾನ್ ನಾಯಕ ಅವರ ಕನಸು ಬೇರೆ ಬೇರೆ ದೇಶಗಳ ಹಾಗೆ ನಮ್ಮ ದೇಶದಲ್ಲಿಯೂ ಸಹಿತ ಜನರು ಜೀವನ ಮಾಡುವ ಶ್ರೀಮಂತಿಕೆಯನ್ನು ಭಾರತ ದೇಶದ ಜನರಿಗೆ ದೊರಕಬೇಕು ನಮ್ಮ ದೇಶ ಬಡತನದಿಂದ ಮುಕ್ತಿ ಹೊಂದಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶರಣು. ಪಾ.ಹಿರೇಮಠ ಗೌರವಾಧ್ಯಕ್ಷರು ಕಾರುಣ್ಯ ಆಶ್ರಮ, ಎಂ.ಶಿವಪ್ಪ ತಾಲೂಕು ಅಧ್ಯಕ್ಷರು ಸಿ. ಪಿ. ಪಾರ್ಟಿ ಸಿಂಧನೂರು, ವೀರೇಶ ತಾಲೂಕ ಯುವ ಘಟಕ ಎನ್. ಸಿ.ಪಿ.ಪಾರ್ಟಿ ಸಿಂಧನೂರು, ಬಸವರಾಜ ಗುರಿಕಾರ ಗ್ರಾ.ಪಂ. ಸದಸ್ಯರು ಚನ್ನಳ್ಳಿ, ತಿಮ್ಮಪ್ಪನಾಯಕ ಹುಡಾ ಎನ್. ಸಿ.ಪಿ.ಪಾರ್ಟಿ ಮುಖಂಡರು, ಶಿವರಾಜ ಉಪಾಧ್ಯಕ್ಷರು ಎನ್. ಸಿ. ಪಿ.ಪಾರ್ಟಿ ಯುವ ಘಟಕ ಸಿಂಧನೂರು,ಅಯ್ಯಪ್ಪ ಎಸ್. ಟಿ.ಘಟಕ ಅಧ್ಯಕ್ಷರುಎನ್.ಸಿ.ಪಿ. ಪಾರ್ಟಿ ಸಿಂಧನೂರು,ಮೌಲಪ್ಪ ಮಾಡಶಿರವಾರ, ಸೇರಿದಂತೆ ಇತರರು ಭಾಗವಹಿಸಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030