ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕಣಿವೆ ಅಗ್ರಹಾರದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಅಭಿಮಾನಿ ಬಳಗ ನಡೆಸಿದ ಅಪ್ಪು ಕ್ರಿಕೆಟ್ ಟೂರ್ನೆಂಟ್ ನ ಸೆಮಿ ಫೈನಲ್ ಪಂದ್ಯದಲ್ಲಿ ಮೆಗ ಇಂಡಿಯನ್ಸ್ ತಂಡದ ಆಟಗಾರ ಅಮೋಘ ಅರ್ಧ ಶತಕಗಳಿಸಿ ಮಿಂಚಿದ ಸ್ಫೋಟಕ ಆಟಗಾರ ಅನ್ವರ್ ನೆರೆದಿದ್ದ ಎಲ್ಲಾ ಕ್ರೀಡಾಭಿಮಾನಿಳ ಗಮನ ಸೆಳೆದರು, ಮೆಗಾ ಇಡಿಯನ್ಸ್ ತಂಡ ಕಣಿವೆ ಅಗ್ರಹಾರ ತಂಡವನ್ನು ಮಣಿಸಿ ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಆಗಿ ಹೊರೊಮ್ಮಿದ್ದಾರೆ. ತಂಡದ ನಾಯಕ ಯೂನುಸು ಖಾನ್ ಮಾತನಾಡಿ ಯುವಕ ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಸ್ನೇಹ ಪ್ರೀತಿಯಿಂದ ಬೆರೆತು ಪಂದ್ಯ ಆಡಬೇಕು ಸೋಲು ಗೆಲುವು ಆಟದ ಒಂದು ಭಾಗವಷ್ಟೇ ಎಂದು ತಿಳಿಸಿದರು
ನಿಯತ್ತು, ಪರಿಶ್ರಮ, ಸ್ವಾಭಿಮಾನ, ತಾಳ್ಮೆ, ಒಗ್ಗಟ್ಟಿನ ಪ್ರದರ್ಶನ ನಮ್ಮ ಆಯುಧವಾಗಬೇಕು ಇವುಗಳ ಜೊತೆ ಆಡಿ ಗುರಿ ಮುಟ್ಟುಬೇಕೇ ವಿನಃ, ಅಡ್ಡ ದಾರಿ ಹಿಡಿಯುವ ಚಾರಿತ್ರ್ಯ ನಮ್ಮದಾಗಬಾರದು ಧನ್ಯವಾದಗಳು ನನ್ನ ಪ್ರೀತಿಯ ಸಹ ಆಟಗಾರರೆಲ್ಲಾರಿಗೂ..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030