ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
*ಸಂಡೂರು:ಪರೇಡ್ ಗೆ ಹಾಜರಾಗದ-ಐವರು ಪೇದೆಗಳು ಅಮಾನತ್ತು*<>ಬಳ್ಳಾಿ ಜಿಲ್ಲೆ ಸಂಡೂರು ಪಟ್ಟಣದ ಶಿವಾಜಿ ವಿದ್ಯಾಮಂದಿರದಲ್ಲಿ,ಜ26ರಂದು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸದ ಆರೋಪದಡಿ.ಸಂಡೂರು ಠಾಣೆಯ ಐವರುವ ಪೊಲೀಸರನ್ನು ಸೇವೆಯಿಂದ ಅಮಾನತ್ತುಗೊಳಿಸಿ,ಬಳ್ಳಾರಿಎಸ್ಪಿ ಸೈದುಲು ಅಡವತ್ ಆದೇಶಿಸಿದ್ದಾರೆ.ಪೊಲೀಸ್ ಪೇದೆಗಳಾದ ರಘುಪತಿ,ಜಂಬುನಾಥ,ವೇಣುಗೋಪಾಲ್,ವೆಂಕಟೇಶನಾಯ್ಕ್,ಹಾಗೂ ಕಾಳಿಂಗಪ್ಪ ಅಮಾನತ್ತು ಶಿಕ್ಷೆಗೆ ಗುರಿಯಾಗಿದ್ದಾರೆ.ಪರೇಡ್ ಗೆ ನಿಯೋಜಿಸಿದ್ದರೂ ಹಾಜರಾಗದಿರುವುದು ಗಂಭೀರ ಲೋಪ ಎಂದು ಪರಿಗಣಿಸಲಾಗಿದೆ. ಈ ಕುರಿತು ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ್ ರೆಡ್ಡಿ ಸಲ್ಲಿಸಿದ ವರದಿ ಆಧರಿಸಿ,ಈ ಕ್ರಮ ಜರುಗಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030