ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
*ಕೂಡ್ಲಿಗಿ:ನಿಂತಿರೋ ಟೆಂಪೊಗೆ-ಟೆಂಪೋ ಡಿಕ್ಕಿ ಇಬ್ಬರಿಗೆ ಗಾಯ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹೊರವಲಯದ ಹನಸಿ ಕ್ರಾಸ್ ಹತ್ತಿರ ರಾಹೆ 50ರಲ್ಲಿ,ಜ26ರ ತಡರಾತ್ರಿ ನಿಂತಿರೋ ಟೆಂಪೋಗೆ ಮತ್ತೊಂದು ಟೆಂಪೋ ಡಿಕ್ಕಿ ಯಾದ ಪರಿಣಾಮ ಈರ್ವರು ಗಾಯಗೊಂಡ ಘಟನೆ ಜರುಗಿದೆ. ರಸ್ಥೆಬದಿಯಲ್ಲಿ
ರಾಜಸ್ಥಾನ ಮೂಲದ ದ್ರಾಕ್ಷಿತುಂಬಿದ್ದ ಬುಲೇರೋ ಟೆಂಪೋಗೆ,ಹಿಂಬದಿಯಲ್ಲಿವೇಗವಾಗಿ ಬಂದ ಬಿಜಾಪುರ ಮೂಲದ ಬುಲೇರೊ ಟೆಂಪೋ ಡಿಕ್ಕಿಹೊಡೆದಿದ್ದು ಹಾಗೇ ಪರಾರಿಯಾಗೋ ಪ್ರಯತ್ನ ಮಾಡಿದ್ದಾನೆ.ಡಿಕ್ಕಿ ಹೊಡೆದ ಪರಿಣಾಮ ದ್ರಾಕ್ಷಿ ತುಂಬಿದ್ದ ಟೆಂಪೋ ರಸ್ಥೆ ಬದಿಯ ತೆಗ್ಗಿಗೆ ಪಲ್ಟಿಯಾಗಿದೆ,ಟೆಂಪೋ ಚಾಲಕ ರಾಜಸ್ಥಾನದ ಮಾಜಿ ಸೈನಿಕ ಸೈಯದ್ ಹಫೀಜ್ ಗೆ ಗಾಯಗಳಾಗಿವೆ,ಅದೃಷ್ಟ ವಶಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಈತನ ಮಗ ಮಜರ್ ಹುಸೇನ್(17)ಗೆ ತೀವ್ರ ಗಾಯವಾಗಿದ್ದು, ಸ್ಥಳಕ್ಕಾಗಮಿಸಿದ ಕೂಡ್ಲಿಗಿ 108ಸಿಬ್ಬಂದಿ ಇಎಮ್ ಟಿಮಾರೇಶ ಹಾಗೂ ಚಾಲಕ ಶ್ರೀಕಾಂತರು.ಗಾಯಾಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದ ಟೆಂಪೋವನ್ನು, ಕೂಡ್ಲಿಗಿ ಹೈವೇ ಪೆಟ್ರೋಲ್ ಪೊಲೀಸ್ ರೇವಣ್ಣ ಹಿಂಬಾಲಿಸಿ ಹಿಡಿದಿದ್ದಾರೆ.
*ಮಾನವೀಯತೆ ತೋರದ ಸಾರ್ವಜನಿಕರು*-ದ್ರಾಕ್ಷಿ ಹಣ್ಣು ತುಂಬಿದ್ದ ಟೆಂಪೋ ಬಿದ್ದಿದ್ದ ಸಂದರ್ಭದಲ್ಲಿ,ನೆರೆದ ಕೆಲ ಜನ ಬಿದ್ದಿದ್ದ ದ್ರಾಕ್ಷಿಹಣ್ಣು ಆಯ್ದುಕೊಳ್ಳುವಲ್ಲಿ ನಿರತರಾಗಿದ್ದರು.ಗಾಯಗೊಂಡವರನ್ನು ರಕ್ಷಿಸುವಲ್ಲಿ ತಮ್ಮೊಂದಿಗೆ ಯಾರೂ ಸಹಕರಿಸಲಿಲ್ಲ, ಎಂದು ಅಂಬುಲೆನ್ಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030