ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
*ವಿರುಪಾಪುರ:ಲಾರಿ ಪಲ್ಟಿ ದೂರು ದಾಖಲು*<>ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ವಿರುಪಾಪುರ ಗ್ರಾಮದಹತ್ತಿರ,ರಾಷ್ಟ್ರೀಯ ಹೆದ್ದಾರಿ50ರಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯ ಲಾರಿ ಪಲ್ಟಿಯಾಗಿದೆ.ಲಾರಿ ಜಖಂಗೊಂಡಿದ್ದು ಲಾರಿಯಲ್ಲಿದ್ದವರು ಪ್ರಾಣಪಾಯಾದಿಂದ ಪಾರಾಗಿದ್ದಾರೆ,ಈ ಕುರಿತು ಲಾರಿ ಮಾಲಿಕ ನೀಡಿದ ದೂರಿನನ್ವಯ,ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಲಾರಿಚಾಲಕ ತಮಿಳು ನಾಡು ಮೂಲದ ಚಿನ್ನಗುಂಡ ಗ್ರಾಮದ ಸೆಲ್ವಂ ಲಾರಿಯನ್ನ,ಅತಿವೇಗ ಅಜಾಗರೂಕತೆಯಿಂದ ಚಲಾಯಿಸಿರಿವುದು ಘಟನೆಗೆ ಕಾರಣ ಎನ್ನಲಾಗಿದೆ.ಲಾರಿ ಮಾಲೀಕ ತಮಿಳುನಾಡಿನ ಸೇಲಂ ಜಿಲ್ಲೆಯ ಪಳೆಮಟ್ಟಿ ಗ್ರಾಮದ ಸುರೇಶ ನೀಡಿದ ದೂರಿನನ್ವಯ,ಕೂಡ್ಲಿಗಿ ಪೊಲೀಸ್ ಠಾಣಾಧಿಕಾರಿ ಎಎಸ್ಐ,ಎಂ. ರುದ್ರಮುನಿಯವರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030