ವಿಜಯನಗರ ಜಿಲ್ಲೆ:ಕೋವಿಡ್-19 ಪರಿಹಾರದ ಚೆಕ್ ವಿತರಣೆ
ಹೊಸಪೇಟೆ(ವಿಜಯನಗರ ಜಿಲ್ಲೆ), ಕೋವಿಡ್ನಿಂದ ಮೃತರಾದ ಕುಟುಂಬದ ಸದಸ್ಯರಿಗೆ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ 1ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಮಂಗಳವಾರ ವಿತರಿಸಿದರು.
ಅದೇ ರೀತಿ ಹೊಸಪೇಟೆ ತಹಸೀಲ್ದಾರ್ ವಿಶ್ವನಾಥ ಅವರು ಸಹ ಕೋವಿಡ್ನಿಂದ ಸಾವನ್ನಪ್ಪಿನದ ಕೆಲ ಮೃತರ ಮನೆಗೆ ತೆರಳಿ ಸಾಂತ್ವಾನ ಹೇಳಿ ಅವರ ಕುಟುಂಬದ ಸದಸ್ಯರಿಗೆ 1ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಗುರುಬಸವರಾಜ್,ಗ್ರಾಮಲೆಕ್ಕಿಗ ಅಜಯ್ ಹಾಗೂ ಕಂದಾಯ ಇಲಖೆ ಸಿಬ್ಬಂದಿಗಳು ಇದ್ದರು.
ವರದಿ. ಮಂಜುನಾಥ್ ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030