ತುಂಗಭದ್ರ ನದಿಯ ಕ್ರಸ್ಟ್ಗೇಟ್ಗಳನ್ನು ಓಪನ್ ಮಾಡಿದ್ದು ನೋಡಲು ಜನಸಾಗರ ಹರಿದು ಬರುತ್ತಿದೆ. ಮಲೆನಾಡಿನಲ್ಲಿ ಆಗುತ್ತಿರುವ ಮಳೆಯ ಹೆಚ್ಚಳದಿಂದ ತುಂಗಭದ್ರ ನದಿಗೆ ನೀರು ಹರಿದು ಬರುತ್ತಿದ್ದು ಅದರ ಒಳಹರಿವಿನ ನಿಯಂತ್ರಣಕ್ಕಾಗಿ ಗೇಟ್ ಗಳನ್ನು ಓಪನ್ ಮಾಡಲಾಗಿದೆ .
ಈ ತುಂಗಭದ್ರೆಯ ಸೊಬಗನ್ನು ನೋಡಲು ಜನಸಾಗರ ಹರಿದುಬರುತ್ತಿದ್ದು ತುಂಗಭದ್ರ ನದಿಯ ಮನಮೋಹಕ ದೃಶ್ಯವನ್ನು ನೋಡಲು ಜನರು ಕುಟುಂಬ ಸಮೇತರಾಗಿ ಬಂದು ಮನಸ್ಸಿಗೆ ನೆಮ್ಮದಿಯನ್ನು ಕಂಡುಕೊಂಡು ಛಾಯಾಚಿತ್ರಗಳ ಮೂಲಕ ತಮ್ಮನ್ನು ತಾವೇ ಕ್ಲಿಕ್ಕಿಸಿಕೊಂಡ ಸಂತೋಷವನ್ನ ಅನುಭಸುತ್ತಿದ್ದಾರೆ .ಇಂತಹ ಅದ್ಭುತ ಸೊಗಸನ್ನು ಕಂಡ ಎಲ್ಲರೂ ಧನ್ಯವಂತರು .ಪ್ರಕೃತಿ ಮಾತೆಯ ಮಡಿಲಿಗೆ ಕೋಟಿ ಕೋಟಿ ನಮನಗಳು .
ವರದಿ.ಸಂಗೀತಾ ವ್ಹಿ ಪಾಟೀಲ್ ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030