ರಬಕವಿ ಬನಹಟ್ಟಿ ನಗರ ಬಂದ್ ಘೋಷಿಸಿ ಪ್ರತಿಭಟನೆ…!!!

Listen to this article

ರಬಕವಿ ಬನಹಟ್ಟಿ ನಗರ ಬಂದ್ ಘೋಷಿಸಿ ಪ್ರತಿಭಟನೆ

ಜನವರಿ 26 ರಂದು ರಾಯಚೂರಿನಲ್ಲಿ ಡಾ॥ ಬಾಬಾ ಸಾಹೇಬ್ ಅಂಬೇಡ್ಕರ್ ಇವರ ಭಾವಚಿತ್ರವನ್ನು ಜಿಲ್ಲಾ ನ್ಯಾಯಧೀಶರಾದ ಶ್ರೀ ಮಲ್ಲಿಕಾರ್ಜುನ ಗೌಡರವರು ತೆರವುಗೊಳಿಸಿ ಅಪಮಾನ ಮಾಡಿದ್ದಾರೆ ಮತ್ತು ಇದರಿಂದ ಅಂಬೇಡ್ಕರ್ ಅನುಯಾಯಿಗಳು ಹಾಗೂ ದೇಶವೆ ತಲೆ ತಗ್ಗಿಸುವಂತಾಗಿದೆ.
ನ್ಯಾಯ ನಿಡುವ ಉನ್ನತ ಸ್ಥಾನದಲ್ಲಿದ್ದು ತಾವೆ ಸಂವಿಧಾನ ಶಿಲ್ಪಿ ಡಾ॥ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ತೋರುವುದು ಸರಿಯಲ್ಲ ಎಂದು ಆರೋಪಿಸಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೇಶಕ್ಕಾಗಿ ದುಡಿದು ತಮ್ಮ ಜೀವನವನ್ನು ದೇಶಕ್ಕೆ ಮುಡಿಪಾಗಿಟ್ಟವರು ಇಂಥವರ ಭಾವಚಿತ್ರವನ್ನು ತೆರವುಗೊಳಿಸಿವುದು ಸರಿಯಲ್ಲ
ಇದು ಸಮಾಜದಲ್ಲಿ ತಾರತಮ್ಯ ಉಂಟುಮಾಡಿ ಸಮಾಜದ ಶಾಂತತೆಯನ್ನು ಕದಡುತ್ತದೆ
ಆದ್ದರಿಂದ ಡಾ॥ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಿದ ನ್ಯಾಯಾಧೀಶರನ್ನು ಈ ಕೂಡಲೆ ನ್ಯಾಯಾಧೀಶ ಸ್ಥಾನದಿಂದ ವಜಾಗೊಳಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರತಿಯೊಂದು ನ್ಯಾಯಾಲಯಗಳಲ್ಲಿ ಅಳವಡಿಸಬೇಕೆಂದು ಪ್ರತಿಭಟಿಸಿ ಇದು ವಿಳಂಬವಾದಲ್ಲಿ ರಾಜ್ಯದ ಎಲ್ಲ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ರಬಕವಿ ಬನಹಟ್ಟಿಯ ಎಲ್ಲ ಕಾರ್ಯಕರ್ತರು, ಪದಾದಿಕಾರಿಗಳು ಮತ್ತು ಮುಖಂಡರು ರಬಕವಿ ಬನಹಟ್ಟಿ ತಹಸಿಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend