ಕುಸಿಯುವ ಹಂತಕ್ಕೆ ಶಾಲೆ ಭಯದಲ್ಲಿ ಮಕ್ಕಳು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಕೆಹೆಚ್ ಡಿಸಿ ಕಾಲೋನಿಯ ಸರ್ಕಾರಿ ಶಾಲೆ ಕಟ್ಟಡ ಬಹಳ ಹಳೆಯದಾಗಿದ್ದರಿಂದ ಮಳೆ ಗಾಳಿಗೆ ಶಿಥಿಲಗೊಂಡು ಕುಸಿಯುವ ಹಂತಕ್ಕೆ ತಲುಪಿದೆ. ದಿನಂಪ್ರತಿ ನೂರಾರು ಮಕ್ಕಳು ಶಾಲೆಯಲ್ಲಿ ಒದುತಿದ್ದು ಸಾವಿನ ದವಡೆಯಲ್ಲಿ ಕುಳಿತುಕೊಳ್ಳವ ಪರಿಸ್ಥಿತಿ ಎದುರಾಗಿದೆ. ಶಾಲೆಯ ಶಿಥಿಲಗೊಂಡ ಗೋಡೆಗಳಲ್ಲಿ ಸತತವಾಗಿ ಮಳೆ ಯಾಗಿದ್ದರಿಂದ ವಿದ್ಯುತ್ ಹರಿದಾಡುತ್ತಿದ್ದು ಮಕ್ಕಳ ಜೀವಕ್ಕೆ ಹಾನಿಯಾಗುವ ಆತಂಕ ಎದುರಾಗಿದೆ.
ಶಾಲೆಯ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು ಕೊಠಡಿಗಳ ಮೇಲ್ಛಾವಣಿ ಉದುರತ್ತಿದ್ದು ಮಳೆಗಾಲದಲ್ಲಿ ಸೋರುತ್ತಿದೆ ಮಳೆಗೆ ವಿಧ್ಯಾರ್ಥಿ ಕುಳಿತುಕೊಳ್ಳವ ಆಸನಗಳು ಸಹ ತುಕ್ಕು ಹಿಡಿಯುತಿದ್ದು ಕುಳಿತುಕೊಳ್ಳಲಾಗದು ಪರಿಸ್ಥಿತಿ ಉದ್ಭವಿಸಿದೆ. ಯಾವ ಸಂದರ್ಭದಲ್ಲಿ ಕೊಠಡಿಗಳ ಗೋಡೆ ಮತ್ತು ಮೇಲ್ಛಾವಣಿ ಬಿಳುತ್ತವೆ ಎಂಬುದನ್ನು ಹೇಳತಿರಹದ್ದಾಗಿದೆ ಪಾಠ ಕಲಿಯುತ್ತಿರುವ ಮಕ್ಕಳು ಹಲವಾರು ಬಾರಿ ಇಲಾಖೆಗೆ ಮನವಿ ಮಾಡಿದರು ಶಾಲೆಯ ಕಡೆ ಗಮನಕೊಡದೆ ನಿರ್ಲಕ್ಷ್ಯ ತೋರುತ್ತಿರುವ ಶಿಕ್ಷಣ ಇಲಾಖೆ ಅಧಿಕಾಗಳು ಈ ಶಾಲೆ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಮನೆಯ ಪಕ್ಕದಲ್ಲೆ ಇರುವುದು ದುರ್ದೈವ..
ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030