ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕರ ವಿಭಾಗಕ್ಕೆ,ಜಿಲ್ಲಾ ಕಾರ್ಯದರ್ಶಿಗಳಾಗಿ ಬಿ.ಎಂ.ಬಸವರಾಜ (ಅಂಗಡಿ) ಬಣವಿಕಲ್ಲು ನೇಮಕ…!!!

Listen to this article

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕರ ವಿಭಾಗ ದಿನಾಂಕ 19.07.2022ರ ಮಂಗಳವಾರ ಕೂಡ್ಲಿಗಿಯ ಪ್ರವಾಸಿ ಮಂದಿರದಲ್ಲಿ ನಡೆದ ಅಸಂಘಟಿತ ಕಾರ್ಮಿಕರ ವಿಭಾಗ (ಕಾಂಗ್ರೆಸ್) ವಿಜಯನಗರ ಜಿಲ್ಲೆ ರಚನೆಗೆ ರಾಜ್ಯಾಧ್ಯಕ್ಷರಾದ ಜಿ.ಎಸ್. ಮಂಜುನಾಥ್ ರವರ ಶಿಫಾರಸ್ಸಿನಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಬಿ.ವಿ.ಶಿವಯೋಗಿ ರವರ ಅನುಮೋದನೆ ಮೇರೆಗೆ ವಿಜಯನಗರ ಜಿಲ್ಲಾಧ್ಯಕ್ಷರು ದುರ್ಗಾ ದಾಸ್ ನಾಯಕ ಇವರ ಉಪಸ್ಥಿತಿಯಲ್ಲಿ ಅಸಂಘಟಿತ ಕಾರ್ಮಿಕರ ವಿಭಾಗ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಬಾಲಾಜಿ ನಾಯಕ್ ಹಾಗೂ  ಕೂಡ್ಲಿಗಿ ತಾಲೂಕು ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷರಾದ ಶಾಮಿಯಾನ ಚಂದ್ರಣ್ಣ ಮತ್ತು ರಾಜ್ಯ ಅಲ್ಪಸಂಖ್ಯಾತರ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸೈಯದ್ ಶುಕುರ್ ಇವರುಗಳ ನೇತೃತ್ವದಲ್ಲಿ ನಡೆದ ವಿಜಯನಗರ ಜಿಲ್ಲಾಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ , ಜಿಲ್ಲಾ ಉಪಾಧ್ಯಕ್ಷರುಗಳಾಗಿ ಕೂಡ್ಲಿಗಿಯ ಅಬ್ದುಲ್ ರೆಹಮಾನ್, ಕುಪ್ಪಿನಕೇರಿ ವೀರೇಶ್, ಮರಿಯಮ್ಮನಹಳ್ಳಿ ವಿರೂಪಾಕ್ಷಿ ಇವರುಗಳು ಆಯ್ಕೆಯಾದರು. ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಸುಧಾಕರ್ ಮೆಗಾವತ್ , ಕಿರಣ್ ನಾಯಕ್, ಮೀನಕೇರೆ ಓಬಳೇಶ್ ಆಯ್ಕೆಯಾದರು ಹಾಗೂ ಜಿಲ್ಲಾ ಕಾರ್ಯದರ್ಶಿಗಳಾಗಿ ಬಿ.ಎಂ.ಬಸವರಾಜ (ಅಂಗಡಿ) ಬಣವಿಕಲ್ಲು, ಲಕ್ಕಜ್ಜಿ ರಾಮಾಂಜನೇಯ ಇವರುಗಳನ್ನು ಆಯ್ಕೆ ಮಾಡಿದರು, ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರುಗಳಾದ ಗಂಗಾಧರ ಗೌಡ, ಈಚಲಬೊಮ್ಮನಹಳ್ಳಿ ಮಹೇಂದ್ರ ಉಪಸ್ಥಿತರಿದ್ದರು…

ವರದಿ. ಎಲೆ, ನಾಗರಾಜ್, ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend