ಚಿತ್ರದುರ್ಗ: ಮೊಳಕಾಲ್ಮುರು / ಲಾಕ್ ಡೌನ್ ಹಾಗೂ ಬಸವ ಜಯಂತಿ ಸಮಯದಲ್ಲಿ ತಾಲೂಕಿನಾ ದ್ಯಂತ ಎಲ್ಲಿಯಾದರೂ ಬಾಲ್ಯ ವಿವಾಹ ನಡೆಸುವುದು ಕಂಡು ಬಂದರೆ ಪೋಷಕರು ಹಾಗೂ ಬಾಲ್ಯ ವಿವಾಹಕ್ಕೆ ಸಹಕಾರ ನೀಡಿದ ವ್ಯಕ್ತಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕಿನ ಶಿಶು ಅಭಿವೃದ್ಧಿ ಇಲಾಖಾ ಅಧಿಕಾರಿ ಶ್ರೀಮತಿ ಸವಿತಾ ಎಚ್ಚರಿಕೆ ನೀಡಿದ್ದಾರೆ ಕಳೆದ ವರ್ಷ ಬಂದ ದೂರುಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಈ ವರ್ಷ ಇಂತಹ ದೂರುಗಳು ಕಂಡು ಬಂದಲ್ಲಿ ತಹಸೀಲ್ದಾರ್, ರಾಜಾಸ್ವಾನಿರಿಕ್ಷಕರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ, ಅಂಗನವಾಡಿ ಕಾರ್ಯಕರ್ತರು ಹಾಗೂ ಮಕ್ಕಳ ಸಹಾಯವಾಣಿ 1908ಕ್ಕೆ ಕರೆಮಾಡಿ ದೂರು ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030