ರಾಯಪುರ ಕಟ್ಟಡ ಕಾರ್ಮಿಕರ ಘಟಕ ಉದ್ಘಾಟನೆ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಪ್ಪ
ಕೂಡ್ಲಿಗಿ.. ಗುಡಿ ಕೋಟೆ ಹೋಬಳಿಯ ರಾಯಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕಾರ್ಮಿಕರ ಸಂಘ ಏಐಟೆಯುಸಿ ಗ್ರಾಮ ಘಟಕ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಹಾಲಿ ಸದಸ್ಯ ಕೃಷ್ಣಪ್ಪ ಉದ್ಘಾಟಿಸಿ ಮಾತನಾಡುತ್ತಾ ರಾಯಪ್ಪರ ಗ್ರಾಮದಲ್ಲಿ ಸುಮಾರು ಜನರು ಕಾರ್ಮಿಕರಿದ್ದು ಕಲ್ಲು ಹೊಡೆಯುವ ಹಾಗೂ ಪಕ್ಕದ ಗ್ರಾಮಗಳಿಗೆ ದಿನನಿತ್ಯ ಗಾರೆ ಕೆಲಸಕ್ಕೆ ಬುತ್ತಿ ಕಟ್ಟಿ ದುಡಿಯಲು ಹೋಗುತ್ತಿದ್ದು ಕಾರ್ಮಿಕರಿಗೆ ಸೌಲಭ್ಯಗಳ ಮಂಡಳಿಯ ಸದಸ್ಯತ್ವ ಪಡೆಯಲು ತಿಳುವಳಿಕೆ ಇಲ್ಲದೆ ವಂಚಿತರಾಗಿದ್ದು ಆದರೆ ಎಐಟಿಯುಸಿ ಸಂಘಟನೆಯಿಂದ ಕಾರ್ಮಿಕರ ಸೌಲಭ್ಯಗಳ ಪಡೆದುಕೊಳ್ಳುವ ತಿಳುವಳಿಕೆ ಸಿಗುವ ಸಾಧ್ಯತೆ ಇದೆ ಎಂದು ಈ ದಿನ ಈ ಕಾರ್ಮಿಕ ಸಂಘಟನೆಯನ್ನು ಉದ್ಘಾಟನೆ ಮಾಡಲು ನನಗೆ ತುಂಬಾ ಖುಷಿಯಾಗಿದ್ದು ಇನ್ನೂ ನೂರಾರು ಹಳ್ಳಿಗಳ ಕಟ್ಟಡ ಕಾರ್ಮಿಕರು ವಂಚಿತರಾಗಲು ಬಿಡದೆ ಕಾರ್ಮಿಕರ ಸೌಲಭ್ಯಗಳನ್ನ ಕೊಡಲು ಸಂಘಟನೆ ಮುಂದಾಗಬೇಕಾಗಿದೆ ಪ್ರತಿಯೊಬ್ಬ ಕಾರ್ಮಿಕರು ಸಂಘಟನೆ ಅಡಿಯಲ್ಲಿ ಸಂಘಟಿತರಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು ಇದೇ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ತಾಲೂಕು ಅಧ್ಯಕ್ಷರಾದ ಯು ಪೆನ್ನಪ್ಪ ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್ಚು ವೀರಣ್ಣ ಸಿಪಿಐ ಪಕ್ಷದ ತಾಲೂಕು ಸಹ ಕಾರ್ಯದರ್ಶಿಗಳಾದ ಮಂಜು ಗ್ರಾಮ ಘಟಕದ ನೂತನ ಗೌರವಾಧ್ಯಕ್ಷರಾಗಿ ಮುಕ್ಕಪ್ಪ ಕುಮಾರಸ್ವಾಮಿ ಅಧ್ಯಕ್ಷರಾಗಿ ಪಾತಣ್ಣ ಉಪಾಧ್ಯಕ್ಷರಾಗಿ ಬಿಟಿ ಶಿವಾರೆಡ್ಡಿ ಕಾರ್ಯದರ್ಶಿಯಾಗಿ ಶಿವಣ್ಣ ಖಜಾಂಚಿ ತಿಪ್ಪೇಸ್ವಾಮಿ ಸಹಕಾರದರ್ಶಿಯಾಗಿ ಆಂಜನೇಯ ಅಗಸರು ಮಂಜುನಾಥ ಸಂಚಾಲಕರು ಬಸವರಾಜ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಉದ್ಘಾಟನಾ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಪ್ಪ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಣ್ಣ ಗೋಪಾಲ ರೆಡ್ಡಿ ಮಂಜುನಾಥ ಬಸವರಾಜ ಜಿಬಿ ಶಿವರಾಜ ಲಿಂಗಯ್ಯ ಗ್ರಾಮಸ್ಥರು ಇನ್ನು ಮುಂತಾದ ಕಾರ್ಮಿಕರು ಉಪಸ್ಥಿತರಿದ್ದರು.
ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030