ಮುಂದಿನ MLA ಬಂಗಾರು ಹನುಮಂತು: ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಅಭಿಮಾನಿಗಳು…!!!

Listen to this article

ಮುಂದಿನ MLA ಬಂಗಾರು ಹನುಮಂತು: ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಅಭಿಮಾನಿಗಳು

ಕೂಡ್ಲಿಗಿ: ತಾಲ್ಲೂಕು ಪ್ರಸಿದ್ಧಿ ಹೊಂದಿರುವ ಮಾರಬ ಗ್ರಾಮದ ಶ್ರೀ ವೀರಭದ್ರೇಶ್ವರ ರಥೋತ್ಸವದಲ್ಲಿ ಅಭಿಮಾನಿಗಳು ರಥೋತ್ಸವಕ್ಕೆ ಮುಂದಿನ ದಿನಗಳಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯ ಶಾಸಕರ ಆಗಬೇಕು, ಅಭಿಮಾನಿಗಳು ಬಾಳೆಹಣ್ಣಿನ ಮೇಲೆ ಹೆಸರು ಬರೆದು ಅಭಿಮಾನಿಗಳು ದೇವರಿಗೆ ಅರ್ಪಿಸಿದರು. ಭಕ್ತರು ತಮ್ಮ ಕುಟುಂಬದ ಸಮಸ್ಯೆ ಬಗೆಹರಿಸಲು, ಉದ್ಯೋಗ, ವಿವಾಹ ಹೀಗೆ ಅನೇಕ ತಮ್ಮ ಮನದಾಸೆ ಈಡೇರಿಸಿಕೊಳ್ಳಲು ಹರಕೆ ಕಟ್ಟಿಕೊಳ್ಳುವುದು ಮಾಮೂಲಿ. ಆದರೆ ಭಕ್ತರು ನಮ್ಮ ಕ್ಷೇತ್ರದಲ್ಲಿ‌ ಮುಂದಿನ 2023ಕ್ಕೆ ಎಂಎಲ್ಎ ಬಂಗಾರು ಹನುಮಂತು ಎಂದು ಬಾಳೆಹಣ್ಣಿನ ಮೇಲೆ ಬರೆದು ರಥೋತ್ಸವದ ಕಳಸಕ್ಕೆ ಎಸೆಯುವುದರ ಮುಖಾಂತರ ಹರಕೆ ಈಡೇರಿಸುವಂತೆ ಬೇಡಿಕೆಯಿಟ್ಟ ಘಟನೆ ಕೂಡ್ಲಿಗಿ ತಾಲೂಕಿನ ಮಾರಬ ಗ್ರಾಮದ ಶ್ರೀ ವೀರಭದ್ರೇಶ್ವರ ರಥೋತ್ಸವದಲ್ಲಿ ನಡೆದಿದೆ. ಬುಧವಾರ ಸಂಜೆ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ನಡೆಯಿತು. ಬಾಳೆಹಣ್ಣಿನ ಮೇಲೆ ತಮ್ಮ ಮನದಾಸೆ ಬರೆದು ರಥೋತ್ಸವ ವೇಳೆ ಕಳಸಕ್ಕೆ ಎಸೆದರೆ ಇಷ್ಟಾರ್ಥ ಈಡೇರಲಿದೆ ಎನ್ನುವ ನಂಬಿಕೆ ಇದೆ. ರಥೋತ್ಸವದ ವೇಳೆ ಭಕ್ತರು ತಮ್ಮ ಮನದಿಂಗಿತ ವ್ಯಕ್ತಪಡಿಸಿ ಹರಕ್ಕೆ ಕಟ್ಟಿಕೊಳ್ಳುತ್ತಾರೆ. ಅದನ್ನು ಬಾಳೆಹಣ್ಣಿನಲ್ಲಿ ಬರೆದು ಭಕ್ತಿ ಸಮರ್ಪಿಸುತ್ತಾರು ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಕೋಶ್ಯಾಧ್ಯಕ್ಷರು ಬಂಗಾರು ಹನುಮಂತು ಇವರ ಅಭಿಮಾನಿಗಳು ತಾಲೂಕಿನ ವಿವಿಧ ಜಾತ್ರಾ ಮಹೋತ್ಸವದಲ್ಲಿ ಬಂಗಾರು ಹನುಮಂತು ಅವರ ಹೆಸರಲ್ಲಿ ಬಾಳೆ ಹಣ್ಣು ಎಸೆಯಲಾಗಿದೆ. ಈ ಬಾರಿಯ ಮಾರಬ ಗ್ರಾಮದಲ್ಲೂ ಬಂಗಾರು ಹನುಮಂತು ಅವರ ಹೆಸರು ಬರೆದು ರಥದ ಕಳಸಕ್ಕೆ ಎಸೆಯಲಾಗಿದೆ.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend