ಮೊಳಕಾಲ್ಮೂರು: ಕಾರ್ಮಿಕ ಇಲಾಖೆ ನೀಡುವ ಫುಡ್ ಹಿಟ್ಟಿಗಾಗಿ ಬೆಳಿಗ್ಗೆಯಿಂದ ಕಾದಿದ್ದ ಕಾರ್ಮಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ.!

Listen to this article

ಚಿತ್ರದುರ್ಗ: ಜಿಲ್ಲಾಯ ಮೊಳಕಾಲ್ಮೂರು ಪಟ್ಟಣದಲ್ಲಿ ಇಂದು (ಜುಲೈ-15) ಕಾರ್ಮಿಕ ಇಲಾಖೆಯಿಂದ ಫುಡ್ ಕಿಟ್ ಗಾಗಿ ಸಾವಿರಾರು ಕಟ್ಟಡ ಕಾರ್ಮಿಕರು ಪಟ್ಟಣದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಹೆಚ್ಚಿನ ಜನರು ಜಮಾಯಿಸಿದರು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಯಾವುದೇ ರೀತಿಯ ಜನರಿಗೆ ಮಾಹಿತಿ ನೀಡಿಲ್ಲ. ಮಧ್ಯವರ್ತಿಗಳ ಹೇಳಿಕೆಯಿಂದ ಪ್ರತಿ ಹಳ್ಳಿಯಲ್ಲಿ ಆಹಾರ ಕಿಟ್ಟು ವಿತರಣೆ ಮಾಡಲಾಗುತ್ತಿದೆ ಎಂದು ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗಿತ್ತು. ಗುರುತಿನ ಚೀಟಿ ಹಿಡಿದು ನೂಕುನುಗ್ಗಲು 12 ಗಂಟೆಯಾದರೂ ಸ್ಥಳಕ್ಕೆ ಯಾವ ಅಧಿಕಾರಿ ಸುಳಿವೇ ಇಲ್ಲದ ಕಾರಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಲಿ-ನಾಲಿ ಬಿಟ್ಟು ಕೂಲಿ ಕಾರ್ಮಿಕರು ಹಳ್ಳಿಯಿಂದ ಬೆಳಗ್ಗೆ 6 ಗಂಟೆಗೆ ಬಂದು ಊಟ ನೀರು ಇಲ್ಲದೆ ಬೆಳಗ್ಗೆಯಿಂದ ನಾವುಗಳು ಕಾಯುತ್ತಿದ್ದೇವೆ ಯಾವ ಅಧಿಕಾರಿಯೂ ಬಂದಿಲ್ಲ ಎಂದು ಕೂಲಿ ಕಾರ್ಮಿಕರಾದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪಟ್ಟಣದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಅವರು ಬಂದು ಈ ಬಗ್ಗೆ ಕಾರ್ಮಿಕ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ವಂದತಿ ನಂಬಿ ಕಿವಿಗೊಡದಿರಿ ನೀವು ನಿಮ್ಮ ಹಳ್ಳಿಗಳಿಗೆ ತೆರಳಿ ಎಂದರು. ಮಂಗಳವಾರದಂದು ಸಚಿವ ಶ್ರೀರಾಮುಲು ಅವರು ಮುಖಾಂತರ 60 ಜನ ಕಟ್ಟಡ ಕಾರ್ಮಿಕರಿಗೆ ಫುಡ್ ಕಿಕ್ ವಿತರಿಸಿದರು. ತಾಲೂಕಿನಲ್ಲಿ 5023 ನೊಂದಾಯಿತ ಕಟ್ಟಡ ಕಾರ್ಮಿಕರು ಹುಡ್ಗೀರ್ ವಿತರಿಸಲು ವೇಳಾಪಟ್ಟಿ ಸಿದ್ಧತೆ ಮಾಡಲಾಗುತ್ತಿದೆ ಇನ್ನು ಕೆಲವೇ ದಿನಗಳಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಿದರು..

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend