ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು / ಜುಲೈ 19 ಮತ್ತು 22ರಂದು ನಡೆಯಲ್ಲಿರುವ 2020-21 ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಕುರಿತು ಪೂರ್ವಾಭಾವಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಶ್ರೀ ಚಿದಾನಂದಪ್ಪ, ಮಾತನಾಡಿ, ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಾದ ಮೊಳಕಾಲ್ಕೂರು ದೌನ್, ಮೊಳಕಾಲ್ಕೂರು ಟೌನ್ (ಬಾಲಕಿಯರ), ನಾಗಸಮುದ್ರ, ದೇವಸಮುದ್ರ, ರಾಂಪುರ, ಲೋನಸಾಗರ, ವಿದ್ಯಾರ್ಥಿನಿಲಯಗಳು ಒಟ್ಟು 194 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ವ್ಯಾಪಾಂಗ ಮಾಡುತ್ತಿದ್ದು, ಸದರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಕೋಲ್-19 ರ ಎಸ್.ಓಪಿ ಪ್ರಕಾರ ಮಾರ್ಗಸೂಚಿಗಳನ್ನು ಅನುಸರಿಸಿ ವಿದ್ಯಾರ್ಥಿನಿಲಯಗಳಲ್ಲ ವಾಸ್ತವ್ಯ ಮತ್ತು ಛಜನಾ ವ್ಯವಸ್ಥೆ ಕಲ್ಪಸಲು ಮತ್ತು ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯಗಳಿಗೆ ಅರೆಕಾಲಕ ಭೋದಕರಿಂದ ಪರೀಕ್ಷೆಗಾಗಿ ಪೂರ್ವತಯಾರಿ ಸಿದ್ಧತೆ ಮಾಡಲು, ಹಾಗೂ ವಿದ್ಯಾರ್ಥಿಗಳಿಗೆ ಮಾತೃ ಪ್ಯಾರಿಟೈಪರ್ ಡಿ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ತಪಾಸಣೆ ಮಾಡಿಸಲು ನಿಲಯಗಳ ಮೇಲ್ವಿಚಾರಕರಿಗೆ ಸೂಚಿಸಿದರು.
ಪ್ರತಿ ವಿದ್ಯಾರ್ಥಿಗೂ ದೂರವಾಣಿ ಮುಖಾಂತರ ಸಂಪರ್ಕಿಸಿ ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿಹಿ ನೀಹಿ ವಿದ್ಯಾರ್ಥಿನಿಲಯಗಳಿಗೆ ಕರೆತಂದು ಪರೀಕ್ಷೆಯನ್ನು ಸುಗಮವಾಗಿ ಬರೆಯಲು ಅವಕಾಶ ಕಲ್ಪಿಸಲು ತಿಳಿಸಿದರು. ಸಭೆಯಲ್ಲಿ ಕಛೇರಿ ಅಧೀಕ್ಷರಾದ ಶ್ರೀಮತಿ ದೀಪಾ ಎಂ. ಶ್ರೀ ವಿಶ್ವನಾಥ್.ಎನ್.ದ.ಸ ವಾರ್ಡನ್ ಶ್ರೀ . ಕೆ.ಹೆಚ್.ಹಾಲೇಶ್, ಶ್ರೀ ಹೆಚ್.ಗುರುಸಿದ್ದಪ್ಪ, ಶ್ರೀ ಕೇಶವಮೂರ್ತಿ ಹೆಚ್, ಶ್ರೀ ಹಸನ್ ಪೀರ್, ಶ್ರೀ ಕರಿಯಪ್ಪ ಎಸ್. ಶ್ರೀಮತಿ ಎಲ್.ಪ್ರೇಮ, ಮತ್ತು ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030