- ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೇವೆಯೇ ಪರೋಪಕಾರಿ ಎಂಬ ಧ್ಯೇಯದೊಂದಿಗೆ* ಕೊರೊನಾ 2ನೇ ಅಲೆಯಲ್ಲಿ ಇಡಿ ದೇಶವೇ ತತ್ತರಿಸಿರುವ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಸಚಿವರಾದ ಮಾನ್ಯ ಬಿ.ಶ್ರೀರಾಮುಲು ವತಿಯಿಂದ ಅಲೆಮಾರಿ ಜನಾಂಗದವರು ಕೊರೊನಾ ಪರಿಣಾಮ ಜೀವನ ನಡೆಸಲು ದುಸ್ತರವಾಗಿರುವುದನ್ನು ಆರಿತು ಅವರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು, ಈ ಸಂದರ್ಭದಲ್ಲಿ ಆಪ್ತಸಹಾಯಕರಾದ ಶ್ರೀ ಪಾಪೇಶ್ ನಾಯಕ, ರಾಂಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಎಲ್ ಪರಮೇಶ್ವರಪ್ಪ, ಯುವ ಮೋರ್ಚಾ ಅಧ್ಯಕ್ಷರಾದ ಹರೀಶ್ ಕೆ.ಎಸ್. ಪ್ರಧಾನ ಕಾರ್ಯದರ್ಶಿಯಾದ ಶಿವಪ್ಪ ವಿ ಶಕ್ತಿ ಕೇಂದ್ರದ ಪ್ರಮುಖ್ ರಾದ ಹನುಮಂತಪ್ಪ ಉಪ್ಪಾರ್ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030