ಜಮಖಂಡಿ ಉಪವಿಭಾಗಾಧಿಕಾರಿ ಕೈ ಮುಗಿದು ಸಂಧಾನ ಮಾಡಿ ಹೇಳಿದರು ಪ್ರತಿಭಟನೆ ಹಿಂತೆಗೆಯದ ಮುಧೋಳ ರೈತರು.
ರನ್ನ ಶುಗರ್ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಮತ್ತು ರೈತರು ಕಳೆದ ಒಂಬತ್ತು ತಿಂಗಳಿನಿಂದ ಬಿಲ್ ಗಳ ಬಾಕಿ.ಕಾರ್ಮಿಕರ ವೇತನ.ಕೆಲವು ರೈತರ ಜಮೀನುಗಳ ಮೇಲೆ ಸಾಲ ತೆಗೆದು ನೋಟಿಸ್ ಜಾರಿ ಮಾಡಿದ್ದಕ್ಕಾಗಿ. ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಸರ್ಕಾರ ಬಗೆ ಹರಿಸಬೇಕು ಎಂದು ಒತ್ತಾಯಿಸಿ ಮುಧೋಳ ತಹಶಿಲ್ದಾರ ಕಚೇರಿ ಮುಂದೆ ಒಂಬತ್ತು ತಿಂಗಳಿನಿಂದ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಮತ್ತು ಕಾರ್ಖಾನೆ ಕಾರ್ಮಿಕರು ಆದರೆ ಮೊನ್ನೆ ಅಷ್ಟೇ ದಿನಾಂಕ 15/4/2022 ಶುಕ್ರವಾರದಂದು ಸತ್ಯಾಗ್ರಹ ಪೆಂಡಾಲ್ ವೇದಿಕೆಗೆ ಕಿಡಗೇಡಿಗಳು ಬೆಂಕಿ ಹಚ್ಚಿ ದೌರ್ಜನ್ಯವೆಸಗಿದರು ಇದು ಮಾನವ ಕುಲವೆ ತಲೆ ತಗ್ಗಿಸುವ ಕೃತ್ಯವಾಗಿದ್ದು ಈ ಕೃತ್ಯವು ಪೂರ್ವನಿಯೋಜಿತವಾಗಿದೆ ಇದರ ಹಿಂದೆ ಇರುವವರನ್ನು ನಾಳೆ ಹನ್ನೆರಡು ಗಂಟೆಯೊಳಗಾಗಿ ಬೆಂಕಿ ಹಚ್ಚಿದವರನ್ನು ಮತ್ತು ಇದರ ಹೆಂದೆ ಇರುವವರನ್ನು ಬಂದಿಸದೆ ಇದ್ದರೆ ಇದೇ 22 ರಂದು ಮುಖ್ಯಮಂತ್ರಿಗಳು ಮುಧೋಳಕ್ಕೆ ಹಲವು ಕಾಮಗಾರಿಗಳ ಉದ್ಘಾಟನೆಗೆ ಬರದಲಿದ್ದಾರೆ ಅಲ್ಲಿ ನಾವು ಯಾವ ಮೂಲಕವಾದರು ಸರಿ ಅವರಿಗೆ ಮನವಿ ಸಲ್ಲಿಸುತ್ತೆವೆ ಜಿಲ್ಲಾಡಳಿತ ನಮ್ಮನ್ನು ಜೈಲಿಗೆ ಕಳುಹಿಸದರು ಸರಿ ನಮ್ಮ ಬೇಡಿಕೆ ಇಡೆರುವವರೆಗೆ ನಾವು ಹೋರಾಟ ನಿಲ್ಲಿಸಲ್ಲ ಹಾಗೆನಾದರು ನಮ್ಮಿಂದ ಕಾರ್ಯಕ್ರಮಕ್ಕೆ ಅಡ್ಡೆಯಾಗುವ ಆತಂಕ ಜಿಲ್ಲಾಡಳಿತಕ್ಕೆ ಇದ್ದರೆ ಗೋವಿಂದ ಕಾರಜೋಳ ಅವರನ್ನು ಕರೆಸಿ ಇಲ್ಲ ಡಿಸಿ ಅವರನ್ನಾದರು ಕರೆಸಿ ನಮ್ಮೊಂದಿಗೆ ಮಾತನಾಡಿ ಭರವಸೆ ನೀಡಬೇಕು ಇಲ್ಲದಿದ್ದರೆ ಮುಖ್ಯಮಂತ್ರಿ ಬಂದ ಸಂದರ್ಭದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೆ ಜಿಲ್ಲಾಡಳಿತವೆ ಹೊಣೆ ಎಂದು ಎಚ್ಚರಿಕೆ ನೀಡಿದ ರೈತ ಸಂಘಟನೆಗಳು.
ವರದಿ.
ಶಿವಶಂಕರ ಕಡಬಲ್ಲವರ
ಮುಧೋಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030