ಮೂಡಲಗಿ ಹಿಂದೂ ರುದ್ರಭೂಮಿಯಲ್ಲಿ ಕೋವಿಡ ಸೋಂಕಿತರ ಮೃತ ವ್ಯಕ್ತಿಗಳನ್ನು ಅಂತ್ಯಸಂಸ್ಕಾರ ಮಾಡುವಾಗ ಸಂಬಂಧಿಕರು ಹಾಗೂ ಅಧಿಕಾರಿಗಳು ಮತ್ತು ಸ್ವಯಂಸೇವಕರು ಉಪಯೋಗಿಸಿರುವ
ಪಿ ಪಿ,ಕೀಟಗಳನ್ನು ಅಲ್ಲೇ ಬಿಟ್ಟು ಹೋಗುವುದು ಹಾಗೂ ಸ್ಮಶಾನದ ಸುತ್ತ ಮುತ್ತ ಆಸ್ಪತ್ರೆ ಹಾಗೂ ಮೆಡಿಕಲಗಳ ತ್ಯಾಜ್ಯ ವಸ್ತುಗಳಾದಂತ ಇಂಜೆಕ್ಷನ್, ಸಲಾಯನ್ ಬಾಟಲಿಗಳು ಔಷಧ ಬಾಟಲಿಗಳು ಸೂಜಿ ಇತ್ಯಾದಿ ವಸ್ತುಗಳನ್ನು ಬಿಸಾಡಿ ಹೋಗುವುದರಿಂದ ಅಲ್ಲಿಯ ಸುತ್ತಮುತ್ತಲಿನ ಜನರಿಗೆ ತೊಂದರೆ ಉಂಟಾಗುತ್ತಿದೆ. ಹಾಗೂ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿರುವ ಜಾಗವನ್ನು ಇಂದು ಪುರಸಭೆಯ ಪೌರಕಾರ್ಮಿಕರಿಂದ ಸ್ವಚ್ಛತೆ ಮಾಡಿ ಹಾಯಪ್ಲೋಕ್ಲೋರೈಡ್ ಅನ್ನು ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ.
ದಯವಿಟ್ಟು ಮೂಡಲಗಿಯ ಸಾರ್ವಜನಿಕರು ಹಾಗೂ ಆಸ್ಪತ್ರೆ ಮೆಡಿಕಲ್ ಶಾಪಗಳ ಮಾಲೀಕರು ವೈದ್ಯರು ಯಾವುದೇ ರೀತಿ ಇತರ ತಪ್ಪು ಕೆಲಸಗಳನ್ನು ಮಾಡಬಾರದು ಎಂದು ತಮ್ಮಲ್ಲಿ ವಿನಂತಿ. ಸಹಕಾರ ನೀಡುತ್ತಿರುವ ಪುರಸಭೆ ಮುಖ್ಯಾಧಿಕಾರಿ ಡಿ,ಎಸ್ ಹರ್ದಿ ಹಾಗೂ ಆರೋಗ್ಯ ಅಧಿಕಾರಿಗಳಾದ ಚಿದಾನಂದ ಮುಗಳಕೋಡ ಅವರಿಗೆ ಧನ್ಯವಾದಗಳು.
ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030