ಶಾಶ್ವತ ಪರಿಹಾರ ಕಾಣದ ಹಾರೂಗೇರಿ ರಾಯಬಾಗ ರಸ್ತೆ.
ಈ ರಸ್ತೆ ಕಾಮಗಾರಿಯು ಆಮೇಗತಿಯಲ್ಲಿ ಸಾಗುತ್ತಿದೆ ಅದುಕುಡ ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಶಾಶ್ವತ ಪರಿಹಾರ ಕಾಣದ ಹಾರೂಗೇರಿ ರಾಯಬಾಗ ರಸ್ತೆ. ಹಾರೂಗೇರಿ ಪಟ್ಟಣದ ಕುರುಬಗೋಡಿ ಜನವಸತಿ ಬಳಿಯಲ್ಲಿ ರಸ್ತೆ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು ಅದೂಕೂಡ ಕಳಪೆ ಕಾಮಗಾರಿ ಯಾಗಿದೆ. ಪ್ರತಿ ದಿನ ನೂರಾರು ವಾಹನಗಳು ಅದರಲ್ಲಿಯೂ ಕಬ್ಬು ಸಾಗಿಸುವ ಟ್ರಾಕ್ಟರ್ಗಳು ಇಲ್ಲಿಂದ ಸಾಗಬೇಕಾದರೆ ಹರಸಾಹಸ ಪಡುತ್ತಿವೆ. ರಸ್ತೆಯು ಅತ್ಯಂತ ಅಪಾಯಕಾರಿ ಹಂತದಲ್ಲಿದ್ದು ಅಪಘಾತಗಳು ಅತ್ಯಂತ ಸುಲಭವಾಗಿ ನಡೆದು ಹೋಗುತ್ತವೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಕೂಡಲೇ ಇದರ ಬಗ್ಗೆ ಗಮನ ಹರಿಸಿ ಈ ಪ್ರದೇಶದಲ್ಲಿ ಶಾಶ್ವತ ಪರಿಹಾರ ಮಾಡಬೇಕು…ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತೆ..
ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030