Kuwj 36 ನೇ ರಾಜ್ಯ ಸಮ್ಮೇಳನ ಹಾಗೂ ರಾಜ್ಯ ಸರ್ವ ಸದಸ್ಯರ ಸಭೆಗೆ ಹೃತೂರ್ವಕ ಆಹ್ವಾನ…!!!

Listen to this article

Kuwj 36 ನೇ ರಾಜ್ಯ ಸಮ್ಮೇಳನ ಹಾಗೂ ರಾಜ್ಯ ಸರ್ವ ಸದಸ್ಯರ ಸಭೆಗೆ ಹೃತೂರ್ವಕ ಆಹ್ವಾನ:-ರಾಜ್ಯದ ಸಮಸ್ತ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳ ಗಮನಕ್ಕೆ ತರಬಯಸುವುದೇನೆಂದರೆ ದಿನಾಂಕ:-2/1/2022 ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 36 ನೇ ರಾಜ್ಯ ಸಮ್ಮೇಳನವು ಕಲುಬುರುಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕಲುಬುರುಗಿ ನಗರದ ಬಸವರಾಜಪ್ಪ ಅಪ್ಪಾ ಸ್ಮಾರಕ ಭವನ,ಅಪ್ಪನ ಕೆರೆ,ಗೋವಾ ಹೋಟೆಲ್ ಹತ್ತಿರ ವಿರುವ ಸ್ಥಳದಲ್ಲಿ ಆಯೋಜಿಸಲಾಗಿದ್ದು, ಈ ಸಮಾರಂಭಕ್ಕೆ ರಾಜ್ಯ ಪ್ರತಿಯೊಬ್ಬ ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಯಲ್ಲಿ ಪಾಲುದಾರರಾಗೋಣದ ಜೊತೆಗೆ ಹಿಂದುಳಿದ ಪ್ರದೇಶ ವೆಂದು ಬಿಂಬಿತವಾಗಿರುವ ಕಲುಬುರುಗಿಯು ಮುಂದುವರೆದ ಪ್ರದೇಶದವೆಂದು ಯಾವುದರಲ್ಲೂ ನಾವು ಕಡಿಮೆ ಇಲ್ಲವೆಂಬಂತೆ ಈ ಸಮ್ಮೇಳನವು ಜರುಗಲಿದ್ದು, ಜೊತೆಗೆ ಬೆಂಗಳೂರಿನಿಂದ ಕಲುಬುರುಗಿಯ ಸಮ್ಮೇಳನಕ್ಕೆ ಹೋಗಿ ಬರುವ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳಿಗೆ ಎರೆಡು ಸಾವಿರ ರೂ ಗಳಿಗೆ ವಿಮಾನ ಯಾನದ ಸೌಲಭ್ಯ ದೊರೆಯಲು ಕಲುಬುರುಗಿಯ ಜಿಲ್ಲಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ,ಪ್ರಧಾನ ಕಾರ್ಯದರ್ಶಿಗಳಾದ ದೇವೆಂದ್ರಪ್ಪ ಅವಂಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ದೇವೇಂದ್ರಪ್ಪ ಕಪನೂರು ರವರ ಹಗಲಿರುಳಿನ ಶ್ರಮ ಇದರಲ್ಲಿದೆ. ಸಂಘದ ಸದಸ್ಯರುಗಳಿಗೆ ಗಿಫ್ಟ್ ಎನ್ನುವಂತೆ ಸಮ್ಮೇಳನದಲ್ಲಿ ಭಾಗವಹಿಸುವ ಗುರುತಿನ ಕಾರ್ಡ್ ಹೊಂದಿರುವ ಸದಸ್ಯರುಗಳಿಗೆ ಒಂದು ಒಳ್ಳೆಯ ಗುಣಮಟ್ಟದ ಬ್ಯಾಗ್,ಫೈಲ್,ಪೆನ್ನು,ಪುಸ್ತಕ,ಗುರುತಿನ ಕಾರ್ಡ್ ಜೊತೆಗೆ ಟ್ಯಾಗ್ ಹಾಗೂ ಒಂದು ಕೆ.ಜಿ.ತೊಗರಿಬೇಳೆ ಪ್ರತಿಯೊಬ್ಬರಿಗೆ ದೊರೆಯಲಿದ್ದು ಈ ಸಮ್ಮೇಳನದ ವಿಶೇಷತೆ ಎಂದೇ ಹೇಳಬೇಕು. ಮರುದಿನ ಅಂದರೆ 3/1/2022 ರಂದು kuwj ರಾಜ್ಯ ಸಂಘದ ಸರ್ವ ಸದಸ್ಯರ ಸಭೆಯನ್ನು (General Body Meeting) ಕಲುಬುರುಗಿಯ ಅದೇ ಸ್ಥಳದಲ್ಕಿ ಆಯೋಜಿಸಲಾಗಿದ್ದು ಪ್ರತಿಯೊಬ್ಬ ಸದಸ್ಯರು ತಪ್ಪದೆ ಭಾಗವಹಿಸಿ ಸರ್ವ ಸದಸ್ಯರ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ವಿಜ್ಞಪ್ತಿ.
ಕಲುಬುರುಗಿಯ ವಿಶೇಷ ಸ್ಥಳಗಳಾದ ಶ್ರೀ ಶರಣ ಬಸವೇಶ್ವರ ದೇವಸ್ಥಾನ,ಹಜರತ್ ಖ್ವಾಜ ಬಂದೆ ನವಾಜ್,ಬುದ್ದ ವಿಹಾರ, ಶ್ರೀದತ್ತಾತ್ರೇಯ ದೇವಸ್ಥಾನ ಗಾಣಗಾಪುರ,ನಗವಿ ಎಲ್ಲಮ್ಮ ದೇವಸ್ಥಾನ ಚಿತ್ತಾಪುರ ಹಾಗೂ ಬಹಮನಿ ಕೋಟೆ ಪ್ರದೇಶಗಳು ನೋಡಲು ರಮ್ಯ ಸ್ಥಳಗಳಿರುವ ನಮ್ಮ ಕಲುಬುರುಗಿಗೆ ತಮಗೆಲ್ಲರಿಗೂ ಗೃದಯ ಪೂರ್ವಕ ಸ್ವಾಗತ ಕೋರುವ. ಈ ಮನವಿಯೊಂದಿಗೆ ರಾಜ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ, ಕಲುಬುರುಗಿಯ ಪ್ರಕ್ಷಣೀಯ ಸ್ಥಳಗಳ ಸಮೇತ ಛಾಯಚಿತ್ರಗಳ ವಿವರ ಹಾಗೂ ರಾಜ್ಯ ಸಮ್ಮೇಳನದಲ್ಲಿ ಪ್ರತಿಯೊಬ್ಬ kuwj ಸದಸ್ಯರಿಗೆ ನೀಡುವ ಬ್ಯಾಗ್,ಫೈಲ್,ಟ್ಯಾಗ್ ನ ಸಮೇತ ನೀಡುವ ಗುರುತಿನ ಕಾರ್ಡ್ ನ ಛಾಯಚಿತ್ರವನ್ನು ರಾಜ್ಯಾಧ್ಯಕ್ಷರು ,ರಾಜ್ಯ ಪದಾಧಿಕಾರಿಗಳು,ಕಲುಬುರುಗಿ kuwj ಜಿಲ್ಲಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಸೇರಿ ಬಿಡುಗಡೆಗೊಳಿಸಿರುವ ಛಾಯಚಿತ್ರ ತಮ್ಮೆಲ್ಲರಿಗಾಗಿ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯ ಕಾರ್ಯದರ್ಶಿಗಳು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ.ಬೆಂಗಳೂರು.ಮೋ:-9535290300…

ವರದಿ. ಮಂಜುನಾಥ್, ಎನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend