ಒಂದು ವರ್ಷದ ಹಿಂದೆ ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿ ಹೋರಾಟ ಗಾರರ ಕಣ್ಣಿಗೆ ಬಿದ್ದು ಸೈಬರ್ ಪೊಲೀಸರ ದಾಳಿ ಗೆ ಸಿಕ್ಕು ಬೆಂಗಳೂರು ಮಹಾನಗರ ದಲ್ಲಿ ಪೊಲೀಸರು ಹಲವು ಕಡೆ ದಾಳಿ ಮಾಡಿ ಸುಮಾರು ಜನರನ್ನ ಬಂದಿಸಿದ್ದರು ಆನ್ ಲೈನ್ ಮೂಲಕ ಲೋನ್ ಕೊಟ್ಟು ಅದರ ದುಪ್ಪಟ್ಟು ವಸೂಲಿ ಮಾಡುವುದು ಕೊಡದೆ ಇದ್ದಾಗ ಮಾಹಿತಿ ಕದ್ದು ಮಾನ ಹರಾಜು ಮಾಡುವಂತ ಕೆಲಸ ಮಾಡುವ ಕಳ್ಳರಿಗೆ ಬೆಂಗಳೂರು ಪೊಲೀಸರು ಹೆಡೆ ಮುರಿ ಕಟ್ಟಿ ಜೈಲ್ ನ ಕಂಬಿ ಹಿಂದೆ ತಳ್ಳಿದ್ದರು ಈಗ ಲಾಕ್ ಡೌನ್ ಇಂದ ಜನ ತತ್ತರಿಸಿ ಚೇತರಿಸಿಕೊಳ್ಳುತ್ತಿದ್ದಂತೆ ಮತ್ತೆ ಆನ್ ಲೈನ್ ವಂಚಕರು ಸಕ್ರಿಯವಾಗಿದ್ದಾರೆ ಇಂದು ಬೆಳಿಗ್ಗೆ ನನಗೆ ಒಂದು ಕಾಲ್ ಬಂತು ಬಂತು 9871313380 ನಾನು ಸುಧಾ ಪ್ಯಾಕೆಟ್ ಫೈನಾನ್ಸ್ ಕಂಪನಿ ಇಂದ ನಿಮಗೆ ಆನ್ ಲೈನ್ ಕ್ರೆಡಿಟ್ ಕಾರ್ಡ್ ಕೊಡ್ತೀವಿ ಸರ್ 5000 ದಿಂದ ಒಂದು ಲಕ್ಷದವರೆಗೆ ಅಂತ ಹೇಳಿದಳು ಆಗಲೇ ಗೊತ್ತಾಯಿತು.
ನನಗೆ ಇವಳು ವಂಚಕಿ ಕಾರಣ ಈ ಹಿಂದೆ ಇವರ ಹುಟ್ಟಡಗಿಸಲು ಹಲವು ಮಾಧ್ಯಮಗಳ ಜೊತೆ ಹೋರಾಟ ಮಾಡಿದವರಲ್ಲಿ ನಾನು ಒಬ್ಬ ಆದರಿಂದ ನಾನು ಅವಳ ಜೊತೆ ನಯವಾಗಿ ಕೇಳಿದೆ ಹೌದು ಲೋನ್ ಬೇಕು ಏನು ಮಾಡಲಿ ಅಂತ ತಕ್ಷಣ ಅವಳು ನಿಮ್ಮ ಆಧಾರ್ ಕಾರ್ಡ್ ಫೋಟೋ ಪಾನ್ ಕಾರ್ಡ್ ಬಿಳಿ ಹಾಳೆಯ ಮೇಲೆ ಒಂದು ಸಹಿ ಮಾಡಿ ನಿಮ್ಮ ಸೆಲ್ಫಿ ಕಳಿಸಿ ಅಂತ ಇವರ ವಂಚನೆ ಅರಿತ ನಾನು ನನ್ನ ಬ್ಯಾಂಕ್ ಖಾತೆಯಲ್ಲಿ ನನ್ನ ಹೆಸರಲ್ಲಿ ಯಾವುದೇ ಹಣ ಆಸ್ತಿ ಇರದ ಕಾರಣ ಇವರ ಬಣ್ಣ ಬಯಲು ಸರಿ ಅಂತ ಕಳಿಸಿದೆ ಇನ್ನು ಒಂದು ಘಂಟೆಯಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ವಿವರ ನಿಮ್ಮ ವಾಟ್ಸಾಪ್ ಗೆ ಕಳಿಸ್ತೀನಿ ಎಂದವಳು ಘಂಟೆ ನಂತರ ನನ್ನ ಹೆಸರಲ್ಲಿ 3000ರೂಪಾಯಿ ಸಾಲ ಬಾಕಿ ಇದೆ ತಕ್ಷಣ ಕಟ್ಟಬೇಕು.ಅನ್ನೋ ಒಂದು ಸಂದೇಶ ಜೊತೆ ಪೇಮೆಂಟ್ ಲಿಂಕ್ ಬಂತು ಕಾಲ್ ಮಾಡಿ ಕೇಳಿದ್ರೆ ನಿಮ್ಮ ಸಾಲ ಬಾಕಿ ಇದೆ ಕಟ್ಟದೆ ಇದ್ದರೆ ಎಲ್ಲರಿಗೂ ಕಾಲ್ ಮಾಡಿ ನಿಮ್ಮ ಮಾನ ಮರ್ಯಾದೆ ತೆಗಿತಿವಿ ಅನ್ನೋ ಬೆದರಿಕೆ ಇವರ ಕಳ್ಳ ಆಟ ಮೊದಲೇ ತಿಳಿದಿದ್ದ ನನಗೆ ಸರಿಯಾಗಿ ಉಗಿಯಲು ಶುರು ಮಾಡಿದಾಗ ಕಾಲ್ ಮಾಡಿ ಬ್ಲಾಕ್ ಮಾಡಿದ್ದು ಈಗ ಜನ ಸಾಮಾನ್ಯರನ್ನು ಹೀಗೆ ವಂಚನೆ ಮಾಡಲು ಶುರು ಮಾಡಿದ್ದು ಪೋಲಿಸರು ಮತ್ತೆ ಎಚೆತ್ತು ಇಂತ ಕಳ್ಳರ ಎಡೆ ಮುರಿ ಕಟ್ಟುವ ಅವಶ್ಯಕತೆ,ಇದೆ ಹಾಗೂ ಜನಸಾಮಾನ್ಯರಲ್ಲಿ ದೌರ್ಜನ್ಯದಿಂದ ಹಣವನ್ನು ವಸೂಲಿ ಮಾಡುತ್ತಾರೆ ಎನ್ನುವ ವದಂತಿಗಳು ಸಹ ಕೇಳಿಬರುತ್ತಿವೆ ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇಂತಹ ದಲ್ಲಾಳಿ ಅಪ್ ಗಳ ಬಗ್ಗೆ ಗಮನವನ್ನು ಅರೆಸಲಿ ಎಂಬುದು ನಮ್ಮ ಆಶಯ…
ವರದಿ. ಮುಕ್ಕಣ್ಣ ಹುಲಿಗುಡ್ಡ, ಕ್ರೈಂ ರಿಪೋರ್ಟರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030