ಬೆಂಗಳೂರು: ಕೊರೋನಾ ಕರ್ಪ್ಯೂ ಮೇ 12ರ ವರೆಗೆ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಕೆಲವರು ಬಾಡಿಗೆ ಮನೆ, ಅಂಗಡಿಗಳನ್ನ ಖಾಲಿ ಮಾಡಿಸಲು ಮಾಲೀಕರು ಮುಂದಾಗಿರುವ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಮನವಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕ ಹಿತ ದೃಷ್ಟಿಯಿಂದ ಮನೆ ಮಾಲೀಕರು, ಮನೆ- ಪಿಜಿ- ಬಾಡಿಗೆ ಅಂಗಡಿ ಮತ್ತು ಬೋಗ್ಯದ ಆಧಾರದ ಮೇಲೆ ನೀಡಿರುವ ಕಟ್ಟಡಗಳನ್ನ ಬಲವಂತವಾಗಿ ತೆರವುಗೊಳಿಸದಿರಲು ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ ಅವರು ಮನವಿ ಮಾಡಿಕೊಂಡಿದ್ದಾರೆ.
ಕರ್ಪ್ಯೂ ಸಮಯದಲ್ಲಿ ಉದ್ಯೋಗದಾತರು ತಮ್ಮ ಉದ್ಯೋಗಸ್ಥರನ್ನ ಕರ್ತವ್ಯದಿಂದ ತೆಗೆದು ಹಾಕುವುದನ್ನ ಮಾಡದಂತೆಯೂ ಮನವಿ ಮಾಡಿಕೊಳ್ಳಲಾಗಿದೆ.
ವರದಿ. ನಳಿನಿ ಬೆಂಗಳೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030